ಎಸ್ಟಿ ಸಮುದಾಯದ ಶಾಸಕರಿಂದ ಮುಖ್ಯಮಂತ್ರಿಗಳ ಭೇಟಿ
Update: 2016-12-02 04:54 GMT
ಬೆಳಗಾವಿ, ಡಿ.2: ಎಸ್ಟಿ ಸಮುದಾಯದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳ ಕುರಿತು ಮಾತುಕತೆ ನಡೆಸಿದರು.
ಸರಕಾರಿ ಅತಿಥಿ ಗೃಹದಲ್ಲಿ ನಡೆದ ಈ ಮಾತುಕತೆ ವೇಳೆ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರು ಹಾಜರಿದ್ದರು.
ಸಮುದಾಯಕ್ಕೆ ನಿಗಧಿ ಮಾಡಿರುವ ಮೀಸಲು ಪ್ರಮಾಣ ಹೆಚ್ವಳ ಮಾಡಬೇಕು ಎಂಬುದು ಶಾಸಕರ ಪ್ರಮುಖ ಬೇಡಿಕೆಯಾಗಿತ್ತು.
ಜನಸಂಖ್ಯೆ ಆಧಾರದ ಮೇಲೆ ಮೀಸಲು ಪ್ರಮಾಣ ಹೆಚ್ಚಳ ಮಾಡುವ ಕುರಿತು ತಾವು ಈಗಾಗಲೇ ಸದನದಲ್ಲಿ ಹೇಳಿಕೆ ನೀಡಿದ್ದು, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಗಳು ತಿಳಿಸಿದರು.
ಶಾಸಕರಾದ ಕೆ.ಎನ್. ರಾಜಣ್ಣ, ವೆಂಕಟ್ಟಪ್ಪ ನಾಯಕ, ಮಸ್ಕಿ ಕ್ಷೇತ್ರದ ಪಾಟೀಲ್, ಸಂಡೂರಿನ ತುಕಾರಾಂ, ಎನ್.ವೈ.ಗೋಪಾಲಕೃಷ್ಣ, ರಘುಮೂರ್ತಿ, ರಾಜೇಶ್ ಮತ್ತಿತರ ಶಾಸಕರು ನಿಯೋಗದಲ್ಲಿದ್ದರು.