ಹುಡುಗಾಟವಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಯುವತಿ!

Update: 2017-01-12 04:51 GMT

ಬೆಂಗಳೂರು, ಜ.12: ಕಾಲೇಜು ವಿದ್ಯಾರ್ಥಿನಿಯೊಬ್ಬಳು ಹುಡುಗಾಟವಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಹೃದಯವಿದ್ರಾವಕ ಘಟನೆ ಗುರುವಾರ ಇಲ್ಲಿನ ಬಾಪೂಜಿನಗರದಲ್ಲಿ ನಡೆದಿದೆ.

ಪಿಯುಸಿ ಕಲಿಯುತ್ತಿದ್ದ ಕೀರ್ತನಾ ಪ್ರತಿದಿನ ಕಾಲೇಜಿನಿಂದ ಮನೆಗೆ ತಡವಾಗಿ ಬರುತ್ತಿದ್ದಳು. ಪ್ರತಿದಿನ ತಡವಾಗಿ ಬರುತ್ತಿದ್ದ ಮಗಳನ್ನು ತಂದೆ ರಮೇಶ್ ಪ್ರಶ್ನಿಸಿದ್ದಾರೆ.

ತಂದೆಗೆ ಹೆದರಿಸಲು ನೇಣು ಹಾಕಿಕೊಳ್ಳುವ ನಾಟಕ ಮಾಡಲು ಹೋದ ಕೀರ್ತನಾ ದುರದೃಷ್ಟವಶಾತ್ ನೇಣು ಕುಣಿಕೆಯಲ್ಲೇ ಪ್ರಾಣಬಿಟ್ಟಿದ್ದಾಳೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News