ಭಾರತೀಯ ಕ್ರಿಕೆಟ್ ತಂಡವನ್ನು 'ಸ್ಟಂಪ್ ಔಟ್' ಮಾಡಿದ ವಿಜಯ್ ಮಲ್ಯ!

Update: 2017-06-06 12:59 GMT

ಹೊಸದಿಲ್ಲಿ, ಜೂ.6: ದೇಶದ ಬ್ಯಾಂಕ್ ಗಳಿಗೆ ಬಹುಕೋಟಿ ಸಾಲ ಬಾಕಿಯಿರಿಸಿ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮದಲ್ಲಿದ್ದ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ವಿಚಲಿತಗೊಂಡು ಬೇಗನೇ ನಿರ್ಗಮಿಸಿದ ಘಟನೆ ನಡೆದಿದೆ,

ವಿರಾಟ್ ಕೊಹ್ಲಿಯವರ ಫೌಂಡೇಶನ್ ಆಯೋಜಿಸಿದ್ದ ಚಾರಿಟಿ ಡಿನ್ನರ್ ಕಾರ್ಯಕ್ರಮದಲ್ಲಿ ವಿಜಯ್ ಮಲ್ಯ ಪಾಲ್ಗೊಂಡಿದ್ದು, ಕೊಹ್ಲಿ ಸೇರಿದಂತೆ ಎಲ್ಲಾ ಭಾರತೀಯ ಕ್ರಿಕೆಟ್ ಆಟಗಾರರು ಕಾರ್ಯಕ್ರಮದುದ್ದಕ್ಕೂ ಉದ್ಯಮಿಯೊಂದಿಗೆ ಅಂತರ ಕಾಯ್ದುಕೊಂಡರು. ಇಷ್ಟೇ ಅಲ್ಲದೆ ವಿವಾದಗಳಿಂದ ತಪ್ಪಿಸಿಕೊಳ್ಳುವ ಸಲವಾಗಿ ಬೇಗನೇ ಕಾರ್ಯಕ್ರಮದಿಂದಲೂ ತೆರಳಿದರು.

ಮಲ್ಯರ ಭಾಗವಹಿಸುವಿಕೆಯಿಂದ ಕೊಹ್ಲಿ ಹಾಗೂ ತಂಡದ ಇತರ ಸದಸ್ಯರು ವಿಚಲಿತಗೊಂಡಿರುವುದನ್ನು ಬಿಸಿಸಿಐನ ಮೂಲಗಳು ಒಪ್ಪಿಕೊಂಡಿವೆ.

“ವಿರಾಟ್ ಆಗಲಿ ಅವರ ಫೌಂಡೇಶನ್ ಆಗಲಿ ಮಲ್ಯರನ್ನು ಆಹ್ವಾನಿಸಿಲ್ಲ.  ಆದರೆ ಚಾರಿಟಿ ಡಿನ್ನರ್ ಗಳನ್ನು ವಹಿಸಿಕೊಂಡವರು ಅವರ ಅತಿಥಿಗಳನ್ನು ಆಹ್ವಾನಿಸುತ್ತಾರೆ. ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭ ಭಾರತ ತಂಡ ವಿಚಲಿತಗೊಂಡಿದ್ದು, ಅವರಿಂದ ಅಂತರದಲ್ಲಿತ್ತು. ಕಾರ್ಯಕ್ರಮದಿಂದ ಭಾರತ ತಂಡ ಬೇಗನೇ ನಿರ್ಗಮಿಸಲು ಮಲ್ಯರ ಆಗಮನವೇ ಮುಖ್ಯ ಕಾರಣ” ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದ್ದ ಬಿಸಿಸಿಐ ನ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News