ಮಾನಸಿಕ ಅಸ್ವಸ್ಥ ಸಹೋದರರನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಗ್ರಾಮಸ್ಥರು

Update: 2017-06-19 09:54 GMT

ಒಡಿಶಾ, ಜೂ.19: ಮಗುವೊಂದನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ ಜನರ ಗುಂಪೊಂದು ಇಬ್ಬರು ಮಾನಸಿಕ ಅಸ್ವಸ್ಥ ಸಹೋದರರನ್ನು ಕಂಬವೊಂದಕ್ಕೆ ಕಟ್ಟಿ ಹಾಕಿ ಅವರ ಮೇಲೆ ಬರ್ಬರ ಹಲ್ಲೆ ನಡೆಸಿದ ಘಟನೆ ಬರಿಪಡ ಎಂಬಲ್ಲಿ ವರದಿಯಾಗಿದೆ. ಹಲ್ಲೆ ನಡೆದ ಸ್ಥಳದಲ್ಲಿ ನೂರಾರು ಜನರು ನೆರೆದಿದ್ದರಲ್ಲದೆ ಯಾರೊಬ್ಬರೂ ಯುವಕರ ರಕ್ಷಣೆಗೆ ಬಂದಿಲ್ಲ. ಇಷ್ಟೇ ಅಲ್ಲದೆ, ಸಹೋದರರ ತಂದೆಯ ಮೇಲೂ ಆಕ್ರಮಣ ನಡೆದಿದೆ.

ಇಬ್ಬರು ಹುಡುಗರೂ ಮಗುವೊಂದರ ಜತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ  ಛಕ್ ಎಂಬಲ್ಲಿ ಗ್ರಾಮಸ್ಥರು ಅವರಿಗೆ ಎದುರಾಗಿದ್ದರು. ತಾವು ದಾರಿ ತಪ್ಪಿದ್ದೇವೆ ಎಂದು ತಿಳಿದ ಹುಡುಗರು ಮನೆಗೆ ಹೋಗುವ ದಾರಿಯನ್ನು ಕೇಳಲಾರಂಭಿಸಿದರು. ಆಗ  ಇವರ ಮೇಲೆ ಸಂಶಯಗೊಂಡ ಗ್ರಾಮಸ್ಥರು ಅವರನ್ನು ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಹುಡುಗರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದರು. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಕಟಕ್ ಎಸ್‍ಸಿಬಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News