ರಾಷ್ಟ್ರಪತಿ ಅಭ್ಯರ್ಥಿ ಮೀರಾಕುಮಾರ್‌ರಿಂದ ದೇವೇಗೌಡರ ಭೇಟಿ

Update: 2017-07-01 07:26 GMT

ಬೆಂಗಳೂರು, ಜು.1: ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಅವರು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಶನಿವಾರ ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಮೀರಾ ಕುಮಾರ್, ಮಾಜಿ ಪ್ರಧಾನಿ ದೇವೇಗೌಡರು ನನ್ನ ನಾಮಪತ್ರಕ್ಕೆ ಸಹಿ ಹಾಕಿದ್ದು ನನ್ನ ಅದೃಷ್ಟ. ಭಾರತೀಯ ರಾಜಕಾರಣದಲ್ಲಿ ಅವರದು ದೊಡ್ಡ ವ್ಯಕ್ತಿತ್ವ ಎಂದರು.

ನಾನು ಸ್ಪೀಕರ್ ಆಗಿದ್ದಾಗ ಅವರು ಸಂಸದರಾಗಿದ್ದರು. ಅವರು ಭಾರತೀಯ ರಾಜಕಾರಣದಲ್ಲಿ ಆಳವಾದ ಜ್ಞಾನವನ್ನ ಹೊಂದಿದ್ದವರು. ಅವರ ಬಳಿ ನಾನು ಹಲವು ಭಾರಿ ಸಲಹೆಗಳನ್ನ ಪಡೆದಿದ್ದಾನೆ ಎಂದು ಹೇಳಿದರು.

ಹೀಗಾಗಿ ನನ್ನ ನಾಮಪತ್ರಕ್ಕೆ ಅವರು ಸಹಿ ಹಾಕಿದ್ದು ನನ್ನ ಅದೃಷ್ಟ. ನಾವು ಒಂದೇ ಸಿದ್ಧಾಂತವನ್ನು ನಂಬಿದವರು. ಇಂದು ತುಳಿತಕ್ಕೊಳಗಾದವರ ಹಕ್ಕಿಗಾಗಿ ಹೋರಾಟ ಮಾಡಬೇಕಿದೆ ಎಂದು ಮೀರಾಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News