ಗುಜರಾತ್ ಶಾಸಕರನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲ: ಆದಾಯ ತೆರಿಗೆ ಇಲಾಖೆ

Update: 2017-08-02 08:07 GMT

ಬೆಂಗಳೂರು, ಆ.2: ನಗರದಲ್ಲಿನ ರೆಸಾರ್ಟ್ ನಲ್ಲಿ ತಂಗಿರುವ ಗುಜರಾತ್ ಶಾಸಕರನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಇಂದು ಬೆಳಗ್ಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ನಿವಾಸ ಹಾಗೂ ಗುಜರಾತ್ ನ 42  ಕಾಂಗ್ರೆಸ್ ಶಾಸಕರು ತಂಗಿರುವ ರೆಸಾರ್ಟ್ ನ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು.  ಈ ದಾಳಿ ಬಿಜೆಪಿಯ ರಾಜಕೀಯ ತಂತ್ರ ಎಂದು ಕಾಂಗ್ರೆಸ್ ಆರೋಪಿಸಿದ ನಂತರ ಆದಾಯ ತೆರಿಗೆ ಇಲಾಖೆ ಈ ಸ್ಪಷ್ಟೀಕರಣ ನೀಡಿದೆ.

ಈ ದಾಳಿಯು ಡಿ.ಕೆ.ಶಿವಕುಮಾರ್ ರನ್ನು ಗುರಿಯಾಗಿಸಿ ನಡೆದಿದೆಯೇ ಹೊರತು, ಗುಜರಾತ್ ನ ಶಾಸಕರನ್ನಲ್ಲ ಎಂದು ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News