ಬಾಡಿಗೆ ನೀಡಲು ವಿಫಲ, ಚೆನ್ನೈನಲ್ಲಿರುವ ರಜನೀಕಾಂತ್ ಶಾಲೆಗೆ ಬೀಗ

Update: 2017-08-16 11:17 GMT

ಚೆನ್ನೈ, ಆ.16: ರಾಜಕೀಯ ಪ್ರವೇಶಿಸಲು ಚಿಂತನೆ ನಡೆಸುತ್ತಿರುವ ಬಹುಭಾಷಾ ನಟ ರಜನೀಕಾಂತ್ ನಗರದಲ್ಲಿರುವ ತನ್ನ ಶಾಲೆಯ ಕಟ್ಟಡಕ್ಕೆ ಬಾಡಿಗೆ ಪಾವತಿಸದೇ ನೂರಾರು ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದ್ದಾರೆ.

ಚೆನ್ನೈ ನಗರದಲ್ಲಿರುವ ರಜನೀಕಾಂತ್‌ರ ಪತ್ನಿ ನಡೆಸುತ್ತಿರುವ ಶಾಲೆಯ ಕಟ್ಟಡ ಮಾಲಿಕನಿಗೆ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಶಾಲೆಗೆ ಬೀಗ ಜಡಿಯಲಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಓದುತ್ತಿರುವ 300ಕ್ಕೂ ಅಧಿಕ ಮಕ್ಕಳ ಭವಿಷ್ಯ ಅತಂತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News