ಗೌರಿ ಹತ್ಯೆಯ ಹಿಂದೆ ಗಾಂಧಿಯನ್ನು ಕೊಂದಿರುವ ಮೆದುಳು: ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ

Update: 2017-09-12 13:12 GMT

ಬೆಂಗಳೂರು, ಸೆ.11: ಬುದ್ಧ, ಬಸವಣ್ಣನ ಗಡಿಪಾರು ಮಾಡಿರುವ ಹಾಗೂ ಗಾಂಧಿಯನ್ನು ಕೊಂದಿರುವ ಮೆದುಳು ಇಂದು ಗೌರಿ ಲಂಕೇಶ್ ಅವರ ಹತ್ಯೆಗೆ ಪೂರ್ಣ ಕಾರಣವಾಗಿದೆ. ಆದ್ದರಿಂದ ಸರಕಾರವು ಮೀನಾಮೇಷ ಎಣಿಸದೆ ಗೌರಿ ಹತ್ಯೆ ಹಿಂದಿರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚೆ ಮಾನವೀಯ ಸಮಾಜವನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ‘ಗೌರಿ ಲಂಕೇಶ್ ಹತ್ಯೆ ವಿರೋಧಿ ವೇದಿಕೆ’ ಹಮ್ಮಿಕೊಂಡಿರುವ ‘ಪ್ರತಿರೋಧ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಗೌರಿ ಲಂಕೇಶ್ ಅವರ ಹತ್ಯೆಯು ಗೌರಿಯೊಬ್ಬರ ಹತ್ಯೆಯಲ್ಲ. ಅದು ನಾಡಿನ, ದೇಶದ ಎಲ್ಲಾ ಮಾನವೀಯತೆಯ ಕಗ್ಗೊಲೆಯಾಗಿದೆ. ಸೈದ್ಧಾಂತಿಕ ಸತ್ಯವನ್ನು ಅರಗಿಸಿಕೊಳ್ಳದವರು ಸತ್ಯವನ್ನು ನಾಶಪಡಿಸುವ ಕೆಲಸವನ್ನು ಬುದ್ಧನ ಕಾಲದಿಂದಲೂ ಮಾಡಿಕೊಂಡು ಬಂದಿದ್ದಾರೆ ಎಂದವರು ನುಡಿದರು.

ಯಾವ ವೈರಿಗಳು ಭಾರತದೊಳಗೆ ನುಸುಳಿ ಅಸಮಾನತೆಯ ವಿಷದ ಬೀಜವನ್ನು ಬಿತ್ತಿ ಹೋಗಿದ್ದಾರೆ ಆ ವೈದಿಕಮುಕ್ತ ಭಾರತವನ್ನು ಕಟ್ಟುವ ದೃಢ ಸಂಕಲ್ಪವನ್ನು ನಾವಿಂದು ಮಾಡಬೇಕಿದೆ. ಗೌರಿ ಹತ್ಯೆಯಿಂದ ವಿರೋಧಿಗಳು ವಿಘ್ನ ಸಂತೋಷಿಗಳಾಗಿರಬಹುದು. ಆದರೆ ನಾವಿಂದು ಗೌರಿ ಹತ್ಯೆಯ ದಿನವನ್ನು ಮುಂದಿನ ಭಾರತ ಕ್ರಾಂತಿಗೆ ನಾಂದಿ ಹಾಡುವ ದಿನವನ್ನಾಗಿ ಮಾಡಿಕೊಳ್ಳುವ ದೃಢ ಸಂಕಲ್ಪ ಮಾಡಬೇಕಿದೆ ಎಂದವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News