ಶ್ರೀನಗರದಲ್ಲಿ ಸಚಿವರನ್ನು ಗುರಿಯಾಗಿಸಿ ಭಯೋತ್ಪಾದಕ ದಾಳಿ: ಮೂವರು ನಾಗರಿಕರು ಮೃತ್ಯು

Update: 2017-09-21 08:44 GMT

ಶ್ರೀನಗರ, ಸೆ.21: ಶ್ರೀನಗರದ ತ್ರಾಲ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯೊಂದಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದು, 12ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.

ಸಚಿವ ನಯೀಮ್ ಅಖ್ತರ್ ಹಾಗೂ ಬೆಂಗಾವಲನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ ಎನ್ನಲಾಗಿದೆ. ನಯೀಮ್ ಅಖ್ತರ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದು, ಅವರ ಚಾಲಕ ಗಾಯಗೊಂಡಿದ್ದಾರೆ.

ಬಸ್ ನಿಲ್ದಾಣದ ಜನನಿಬಿಡ ಪ್ರದೇಶಕ್ಕೆ 2 ಗ್ರೆನೇಡ್ ಗಳನ್ನು ಎಸೆದ ಭಯೋತ್ಪಾದಕರು ಅಲ್ಲಿಂದ ತಕ್ಷಣ ಪರಾರಿಯಾಗಿದ್ದಾರೆ.

8 ಪ್ಯಾರಾಮಿಲಿಟರಿ ಸಿಬ್ಬಂದಿ, ನಾಲ್ವರು ಪೊಲೀಸರು ಹಾಗೂ ಕೆಲ ನಾಗರಿಕರು ದಾಳಿಯಲ್ಲಿ ಗಾಯಗೊಂಡಿದ್ದು ಮೃತಪಟ್ಟ ಮೂವರು ವಿದ್ಯಾರ್ಥಿಗಳು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News