ಕಮಲ್‌ಹಾಸನ್‌ರನ್ನು ಭೇಟಿಯಾದ ಅರವಿಂದ ಕೇಜ್ರಿವಾಲ್

Update: 2017-09-21 10:22 GMT

ಚೆನ್ನೈ, ಸೆ.21: ಆಪ್ ಮುಖ್ಯಸ್ಥ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಖ್ಯಾತ ಬಹುಭಾಷಾ ನಟ ಕಮಲ್‌ಹಾಸನ್‌ರನ್ನು ಅವರ ನಿವಾಸದಲ್ಲಿ ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದರು.

ಇಬ್ಬರು ನಾಯಕರು ರಾಜಕೀಯಕ್ಕೆ ಸಂಬಂಧಿಸಿ ಚರ್ಚೆ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಮೂಲ ತಿಳಿಸಿದ್ದು, ತಮಿಳುನಾಡಿನ ಹಿರಿಯ ನಟ ಕಮಲ್ ಹಾಸನ್ ಆದಷ್ಟು ಬೇಗನೆ ರಾಜಕೀಯಕ್ಕೆ ಪ್ರವೇಶಿಸುತ್ತಾರೆಂಬ ಸುದ್ದಿಗೆ ಬಲ ಬಂದಿದೆ.

ರಾಜ್ಯ ಸರಕಾರದ ವಿರುದ್ಧ ಭ್ರಷ್ಟಾಚಾರ ಆರೋಪವನ್ನು ಮಾಡುತ್ತಿರುವ ಕಮಲ್‌ಹಾಸನ್ ಇತ್ತೀಚೆಗೆ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.

ಈ ವರ್ಷದ ಮೇನಲ್ಲಿ ಒಂದು ವರ್ಷ ಪೂರೈಸಿದ್ದ ಸಿಪಿಐ(ಎಂ) ನೇತೃತ್ವದ ಕೇರಳದ ಎಲ್‌ಡಿಫ್ ಸರಕಾರಕ್ಕೆ ಕಮಲ್ ಅಭಿನಂದನೆ ಸಲ್ಲಿಸಿದ್ದರು. ಕಳೆದ ತಿಂಗಳು ಚೆನ್ನೈನಲ್ಲಿ ಡಿಎಂಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 ‘‘ನಮ್ಮಿಬ್ಬರ ವಿಚಾರಧಾರೆಗಳೂ ಒಂದೇ ಆಗಿವೆ. ನಾನು ಕೇಜ್ರಿವಾಲ್‌ರಿಂದ ಸಲಹೆ ಪಡೆದಿದ್ದೇನೆ. ಆಪ್ ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿದೆ ಎಂದು ಕಮಲ್‌ಹಾಸನ್ ಹಾಗೂ ಕೇಜ್ರಿವಾಲ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News