ಒಡಿಶಾ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರು ಸೇರಿ ಐವರ ಬಂಧನ
Update: 2017-09-21 10:22 GMT
ಹೊಸದಿಲ್ಲಿ, ಸೆ.21: ವೈದ್ಯಕೀಯ ಪ್ರವೇಶ ಹಗರಣಕ್ಕೆ ಸಂಬಂಧಿಸಿ ಸಿಬಿಐ ಒಡಿಶಾ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಸೇರಿದಂತೆ ಐವರನ್ನು ಗುರುವಾರ ಬಂಧಿಸಿದ್ದಾರೆ.
ನಿವೃತ್ತ ನ್ಯಾಯಾಧೀಶ ಇಶ್ರತ್ ಮಸ್ರೂರ್ ಖುದ್ದೂಸಿ, ಮಧ್ಯವರ್ತಿ ವಿಶ್ವನಾಥ್ ಅಗರ್ವಾಲ, ಖಾಸಗಿ ಕಾಲೇಜುಗಳ ಮಾಲಕರಾದ ಬಿ.ಪಿ. ಯಾದವ್ ಹಾಗೂ ಪಲಾಶ್ ಯಾದವ್ ಮತ್ತು ಹವಾಲ ಆಪರೇಟರ್ ರಾಮ್ ದೇವ್ ಸರಸ್ವತ್ ಎಂಬವರನ್ನುಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ.
ಖುದ್ದೂಸಿ ಹಾಗೂ ಇತರ ನಾಲ್ವರ ವಿರುದ್ಧ ಎಫ್ ಐಆರ್ ದಾಖಲಿಸಿದ ನಂತರ ದಿಲ್ಲಿ, ಲಕ್ನೋ, ಭುವನೇಶ್ವರ ಸೇರಿದಂತೆ 8 ಕಡೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿಯ ಸಂದರ್ಭ 1.91 ಕೋಟಿ ರೂ,ಗಳನ್ನು ವಶಪಡಿಸಿಕೊಳ್ಳಲಾಗಿದೆ.