ಗಾಂಧೀಜಿ ಹತ್ಯೆಯಿಂದ ಕಾಂಗ್ರೆಸ್ ಗೆ ಮಾತ್ರ ಲಾಭವಾಗಿದೆ: ಉಮಾಭಾರತಿ

Update: 2017-10-12 13:58 GMT

ಗುಜರಾತ್, ಅ.12: ಮಹಾತ್ಮಾ ಗಾಂಧೀಜಿಯವರ ಹತ್ಯೆಯಿಂದ ಕಾಂಗ್ರೆಸ್ ಗೆ ಮಾತ್ರ ಲಾಭವಾಗಿದೆ ಎಂದು ಕೇಂದ್ರ ಸಚಿವೆ ಉಮಾಭಾರತಿ ಹೇಳಿದ್ದಾರೆ.

“ಮಹಾತ್ಮಾ ಗಾಂಧೀಜಿಯವರ ಹತ್ಯೆಯಿಂದ ಕಾಂಗ್ರೆಸ್ ಗೆ ಮಾತ್ರ ಲಾಭವಾಗಿದೆ. ಗಾಂಧೀಜಿ ಹತ್ಯೆಯ ಬಗ್ಗೆ ಮರುಪರಿಶೀಲನೆಯಾಗಬೇಕು. ಗೋಡ್ಸೆ ಗಾಂಧಿಯವರನ್ನು ಕೊಂದಿರಬಹುದು. ಆದರೆ ಆತನನ್ನು ಪ್ರೇರೇಪಿಸಿದವರು ಯಾರು” ಎಂದು ಅವರು ಪ್ರಶ್ನಿಸಿದರು.

ಗಾಂಧೀಜಿ  ಹತ್ಯೆಯ ಮರು ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನಡೆಸಲು ಸಹಾಯಕವಾಗುವಂತೆ ಸುಪ್ರಿಂ ಕೋರ್ಟ್ ಅಮಿಕಸ್‌ ಕ್ಯೂರಿ ಯನ್ನು ನೇಮಕ ಮಾಡಿದ ನಂತರ ಉಮಾಭಾರತಿಯವರ ಈ ಹೇಳಿಕೆ ಹೊರಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News