ಮೈಸೂರು ಜಿಲ್ಲಾ ಕಾಂಗ್ರೆಸ್ ವಕ್ತಾರ ಜೆಡಿಎಸ್ ಗೆ ಸೇರ್ಪಡೆ
Update: 2017-10-20 10:02 GMT
ಬೆಂಗಳೂರು, ಅ.20: ಮೈಸೂರು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಸ್.ಶಂಕರ್ ಸಹಿತ ಹಲವರು ಇಂದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಕಚೇರಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಎಸ್.ಶಂಕರ್, ಮೈಸೂರಿನ ರಂಗಸ್ವಾಮಿ ತಾರಯ್ಯ, ಎಂ.ಆರ್.ಸುರೇಂದ್ರ ಕುಮಾರ್, ರಂಗನಾಥ ಸಹಿತ ಹಲವು ಸ್ಥಳೀಯ ಮುಖಂಡರು ಜೆಡಿಎಸ್ಗೆ ಸೇರ್ಪಡೆಯಾದರು.
ಬಳಿಕ ಮಾತನಾಡಿದ ಎಸ್.ಶಂಕರ್, ನಾನು ಸೇರಿದಂತೆ ನನ್ನ ಜೊತೆಗಾರರು ಕಾಂಗ್ರೆಸ್ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಆದರೆ ಆ ಭಾಗದ ಸಚಿವರು ನಮ್ಮನ್ನು ಕಡೆಗಣಿಸಿದರು. ಇದರಿಂದ ಬೇಸತ್ತು ಜೆಡಿಎಸ್ ಸೇರಿರುವುದಾಗಿ ತಿಳಿಸಿದರು.