ಅ.21ರಂದು ದತ್ತಿ ಪ್ರಶಸ್ತಿ ಪ್ರದಾನ

Update: 2017-10-20 12:32 GMT

ಬೆಂಗಳೂರು, ಅ.20: ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಅ.21ರಂದು ಸಂಜೆ 5.30 ಕ್ಕೆ ನಗರದ ಕಸಾಪದಲ್ಲಿ ಹಮ್ಮಿಕೊಳ್ಳಲಾಗಿದೆ.

ಎ.ಆರ್.ನಾರಾಯನಘಟ್ಟ, ಸರೋಜಮ್ಮ ಗಾಂಧಿ ಪುದುವಟ್ಟು, ಪಿ.ಕೆ. ನಾರಾಯಣ ಹಾಗೂ ಪಿ.ಕೆ.ಸುಂದರಿ ಸ್ಮರಣಾರ್ಥ ಪಿ.ಕೆ.ನಾರಾಯಣ ಸಾಹಿತ್ಯ ಪ್ರಶಸ್ತಿಯನ್ನು ಗಾಂಧಿ ಭವನದ ಅಧ್ಯಕ್ಷ ಡಾ.ವೂಡೆ ಕೃಷ್ಣ ಹಾಗೂ ಸಾಹಿತಿ ಕೆ.ಟಿ.ಗಟ್ಟಿ ಅವರಿಗೆ ನೀಡಲಾಗುತ್ತಿದೆ.

ಪ್ರಶಸ್ತಿಯನ್ನು ಗಾಂಧಿಯ ಮೊಮ್ಮಗಳಾದ ಸುಮಿತ್ರಾ ಗಾಂಧಿ ಕುಲಕರ್ಣಿ ಪ್ರದಾನ ಮಾಡಲಿದ್ದು, ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್, ಗಾಂಧಿ ಪುದುವಟ್ಟು ಸ್ಥಾಪಕರಾದ ಎ.ಆರ್.ನಾರಾಯಣ ಘಟ್ಟ ಹಾಗೂ ವರದಾ ಶ್ರೀನಿವಾಸ್ ಪಾಲ್ಗೊಳ್ಳಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News