ಪೇಜಾವರ ಶ್ರೀ ಜೊತೆ ಚರ್ಚೆಗೆ ಸಿದ್ಧ: ಜಾಮದಾರ

Update: 2017-10-23 11:41 GMT

ಬೆಂಗಳೂರು, ಅ. 23: ಲಿಂಗಾಯತ ಸ್ವತಂತ್ರ ಧರ್ಮದ ಚರ್ಚೆಯ ಬಗ್ಗೆ ಪೇಜಾವರ ಶ್ರೀ ನೀಡಿರುವ ಆಹ್ವಾನವನ್ನು ಲಿಂಗಾಯತ ಧರ್ಮ ವೇದಿಕೆಯ ಕಾರ್ಯದರ್ಶಿ ಎಸ್.ಎಂ.ಜಾಮದಾರ ಸ್ವೀಕರಿಸಿದ್ದಾರೆ.

ಪೇಜಾವರ ಶ್ರೀಗಳೇ ಸೂಚಿಸಿದ ಜನವರಿ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಚರ್ಚಿಸಲು ಸಿದ್ಧನಿದ್ದೇನೆ. ತಮ್ಮ ತಂಡದವರು ಈ ಚರ್ಚೆಯಲ್ಲಿ ಭಾಗವಹಿಸಲಿದ್ದು, ಪೇಜಾವರ ಶ್ರೀಯವರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಎಂದು ಎಸ್.ಎಂ. ಜಾಮದಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News