ಚಲಿಸುತ್ತಿದ್ದಂತೆಯೇ ಬೆಂಕಿಗಾಹುತಿಯಾದ ಶಾಲಾ ಮಕ್ಕಳಿದ್ದ ಬಸ್

Update: 2017-10-31 10:07 GMT

ಹೊಸದಿಲ್ಲಿ, ಅ. 31: ಖಾಸಗಿ ಶಾಲೆಯೊಂದರ ಬಸ್ ಗೆ ಇಂದು ಬೆಳಗ್ಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದು, ಅದರಲ್ಲಿದ್ದ 33 ಮಂದಿ ವಿದ್ಯಾರ್ಥಿಗಳು ಕೂದಲೆಳೆಯ ಅಂತರದ ಅಪಾಯದಿಂದ ಪಾರಾಗಿದ್ದಾರೆ.

ಕೇಂದ್ರೀಯ ವಿದ್ಯಾಲಯದ ನರೈನ ಶಾಖೆಯ ಶಾಲಾ ವಿದ್ಯಾರ್ಥಿಗಳು ಈ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ದಕ್ಷಿಣ ದಿಲ್ಲಿಯ ಧೌಲ ಖಾನ್ ಪ್ರದೇಶದಿಂದ ಬಸ್ ಹಾದು ಹೊಗುತ್ತಿದ್ದಂತೆಯೇ ಅದಕ್ಕೆ ಬೆಂಕಿ ಹತ್ತಿಕೊಂಡಿತ್ತು. ಎಲ್ಲಾ ಮಕ್ಕಳನ್ನೂ ಕೂಡಲೇ ಬಸ್ ನಿಂದ ಸುರಕ್ಷಿತವಾಗಿ ಇಳಿಸಲಾಯಿತು. ಯಾರಿಗೂ ಸುಟ್ಟ ಗಾಯಗಳುಂಟಾಗಿಲ್ಲ ಎಂದು ತಿಳಿದುಬಂದಿದೆ.

ಈ ಘಟನೆಯ ಬಗ್ಗೆ ಬೆಳಗ್ಗೆ 10:10ಕ್ಕೆ ಅಗ್ನಿಶಾಮಕ ದಳಕ್ಕೆ ಕರೆ ಹೋಗಿದ್ದು ಕೂಡಲೇ ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ಧಾವಿಸಿ ಬಂದು ಬೆಂಕಿ ನಂದಿಸಿದವು.

ಬಸ್ ಗೆ ಬೆಂಕಿ ಹತ್ತಲು ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲವಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News