ಆದಿತ್ಯನಾಥ್ ಮುಂದಿದ್ದ ಮೇಜಿನಲ್ಲಿ ತಲೆಕೆಳಗಾದ ತ್ರಿವರ್ಣ ಧ್ವಜ!

Update: 2017-11-04 11:15 GMT

ಟ್ವಿಟರಿಗರ ಆಕ್ರೋಶ

ಹೊಸದಿಲ್ಲಿ, ನ.4:  ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಮಾರಿಷಸ್ ದೇಶದಲ್ಲಿ ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಂದರ್ಭ ಭಾರತದ ತ್ರಿವರ್ಣಧ್ವಜ ತಲೆಕೆಳಗಾಗಿರುವಂತೆ ಇಟ್ಟಿರುವ ಘಟನೆ ಭಾರೀ ವಿವಾದ ಸೃಷ್ಟಿಸಿದೆ. 

ಆದಿತ್ಯನಾಥ್ ಮತ್ತು ಗಿರಿರಾಜ್ ಸಿಂಗ್ ವಿಸಿಟರ್ಸ್ ಬುಕ್ ಒಂದರಲ್ಲಿ ಬರೆಯುವಾಗ ಮೇಜಿನಲ್ಲಿದ್ದ ರಾಷ್ಟ್ರಧ್ವಜ ತಲೆಕೆಳಗಾಗಿತ್ತು. ಗಿರಿರಾಜ್ ಸಿಂಗ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಈ ವಿಸಿಟರ್ಸ್ ಬುಕ್ ನಲ್ಲಿ ಬರೆಯುತ್ತಿರುವ ಫೋಟೋ ಪೋಸ್ಟ್ ಮಾಡಿದ್ದು, ಈ ಪ್ರಮಾವನ್ನು ಗಮನಿಸಿದ ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಾಯಕ ಶೆಹಝಾದ್ ಪೂನಾವಾಲ ಟ್ವೀಟ್ ಮಾಡಿ "52 ವರ್ಷಗಳಲ್ಲಿ ರಾಷ್ಟ್ರಧ್ವಜವನ್ನು ಅರಳಿಸದವರು, ತ್ರಿವರ್ಣಧ್ವಜಕ್ಕೆ ಮಾಡಿದ ಈ ಅವಮಾನವನ್ನು ಗಮನಿಸಲಿಕ್ಕಿಲ್ಲ'' ಎಂದು ಸಚಿವರನ್ನು ಅಣಕಿಸಿದ್ದಾರೆ.

ಇನ್ನೊಬ್ಬ ಕಾಂಗ್ರೆಸ್ ನಾಯಕ ಹಾಗೂ ಮಧ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅರುಣ್ ಯಾದವ್ ಅವರು ಟ್ವೀಟ್ ಮಾಡಿ "ಪ್ರಾಯಶಃ ಅವರು  ವಂದೇ ಮಾತರಂ ಬರೆಯುತ್ತಿದ್ದಾರೆ. ಇದೇ ಕಾರಣದಿಂದಾಗಿ ಅವರಿಗೆ ರಾಷ್ಟ್ರಧ್ವಜ ಉಲ್ಟಾ ಆಗಿರುವುದು ಕಂಡಿಲ್ಲ'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News