ಉತ್ತರ ಪ್ರದೇಶ: ಸರಕಾರಿ ಇಂಜಿನಿಯರ್ ನಿವಾಸದ ಮೇಲೆ ಐಟಿ ದಾಳಿ
Update: 2017-11-11 10:59 GMT
ಲಕ್ನೋ, ನ.11: ಉತ್ತರ ಪ್ರದೇಶದ ನೀರಾವರಿ ಇಲಾಖೆ ಇಂಜಿನಿಯರ್ ಒಬ್ಬರಿಂದ 50 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿರುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ.
ದಿಲ್ಲಿ, ನೋಯ್ಡಾ, ಗಾಝಿಯಾಬಾದ್, ಗುರ್ಗಾಂವ್ ಹಾಗೂ ಇತರ 22 ಪ್ರದೇಶಗಳಲ್ಲಿ ದಾಳಿ ನಡೆಸಿದ್ದು, ಇಂಜಿನಿಯರ್ ರಾಜೇಶ್ವರ್ ಸಿಂಗ್ ಯಾದವ್ ಎಂಬವರಿಗೆ ಸೇರಿದ 2.5 ಕೋಟಿ ರೂ. ಮೊತ್ತದ ಚಿನ್ನಾಭರಣ ಹಾಗು ನಗದನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಯಾದವ್ ಸಹೋದರ ಹಾಗು ಸಂಬಂಧಿಯ ನಿವಾಸಗಳ ಮೇಲೂ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.