ಆದಿತ್ಯನಾಥ್ ನೇತೃತ್ವದ ರ‍್ಯಾಲಿಯಲ್ಲಿ ತ್ರಿವರ್ಣ ಧ್ವಜಕ್ಕಿಂತ ಮೇಲೆ ಹಾರಿತು ಬಿಜೆಪಿ ಬಾವುಟ!

Update: 2017-11-19 06:00 GMT

ಉತ್ತರ ಪ್ರದೇಶ, ನ.19: ಇಲ್ಲಿನ ಗಾಝಿಯಾಬಾದ್ ನ ರಾಮ್ ಲೀಲಾ ಮೈದಾನದಲ್ಲಿ ನಡೆದ ಸಿಎಂ ಆದಿತ್ಯನಾಥ್ ನೇತೃತ್ವದ ರ‍್ಯಾಲಿಯೊಂದರಲ್ಲಿ ತ್ರಿವರ್ಣ ಧ್ವಜಕ್ಕಿಂತಲೂ ಮೇಲ್ಗಡೆ ಬಿಜೆಪಿ ಧ್ವಜವನ್ನು ಹಾರಿಸಿದ ಘಟನೆ ನಡೆದಿದೆ ಎಂದು thequint.com ವರದಿ ಮಾಡಿದೆ.

ಸುಮಾರು ಅರ್ಧ ಗಂಟೆಗಳ ಕಾಲ ಬಿಜೆಪಿ ಬಾವುಟವನ್ನು ತ್ರಿವರ್ಣ ಧ್ವಜಕ್ಕಿಂತ ಮೇಲೆ ಹಾರಿಸಲಾಗಿದೆ. ಆದಿತ್ಯನಾಥ್ ಬರುವುದಕ್ಕೂ ಮೊದಲು ಈ ಘಟನೆ ನಡೆದಿತ್ತು. ಬಿಜೆಪಿ ಕಾರ್ಯಕರ್ತರೇ ತ್ರಿವರ್ಣ ಧ್ವಜಕ್ಕಿಂತ ಮೇಲೆ ಬಿಜೆಪಿ ಬಾವುಟವನ್ನು ಹಾರಿಸಿದ್ದರು ಎಂದು ಸ್ಥಳದಲ್ಲಿದ್ದ ಪತ್ರಕರ್ತರು ಹೇಳಿರುವುದಾಗಿ thequint.com ವರದಿ ಮಾಡಿದೆ.

ಅಂತರ್ಜಾಲದಲ್ಲಿ ಈ ಪ್ರಮಾದದ ಫೋಟೊ ವೈರಲ್ ಆಗುತ್ತಿದ್ದಂತೆ ಜಿಲ್ಲಾಡಳಿತ ಬಾವುಟವನ್ನು ಕೆಳಗಿಳಿಸಿದೆ. ಆದಿತ್ಯನಾಥ್ ರ್ಯಾಲಿಗೆ ತಲುಪುವ ಮೊದಲೇ ಬಾವುಟವನ್ನು ಕೆಳಗಿಳಿಸಲಾಗಿದೆ ಎನ್ನಲಾಗಿದೆ.

ಆದರೆ ಈ ಬಗ್ಗೆ ಯಾವುದೇ ಎಫ್ ಐಆರ್ ದಾಖಲಾಗಿಲ್ಲ ಹಾಗು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News