ಮಹಿಳೆ ಜತೆ ಅನುಚಿತವಾಗಿ ವರ್ತನೆ: ಆರೋಪ

Update: 2017-11-23 14:27 GMT

ಬೆಂಗಳೂರು, ನ.23: ಮಹಿಳಾ ಪ್ರಯಾಣಿಕರೊಬ್ಬರೊಂದಿಗೆ ಶಾಂತಿನಗರ ಬಸ್ ನಿಲ್ದಾಣದಲ್ಲಿ ತಮಿಳುನಾಡು ಬಸ್ ಚಾಲಕ ಮತ್ತು ನಿರ್ವಾಹಕ ಅನುಚಿತವಾಗಿ ನಡೆದುಕೊಂಡಿರುವ ಘಟನೆ ನಡೆದಿದೆ.

ಅಲಹಾಬಾದ್‌ನಿಂದ ಬೆಂಗಳೂರಿಗೆ ಬಂದಿದ್ದ ಡಾಕ್ಟರ್ ಪಟೇಲ್ ಎಂಬ ಮಹಿಳೆ ತಡರಾತ್ರಿ ಶಾಂತಿನಗರ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ವೆಲ್ಲೂರಿಗೆ ಟಿಕೆಟ್ ಕೊಟ್ಟ ಕಂಡಕ್ಟರ್ ಹತ್ತು ನಿಮಿಷದ ನಂತರ ಬಸ್ ಹೊರಡುತ್ತದೆ ಎಂದು ಹೇಳಿದ್ದರು. ಆದರೆ, 2 ಗಂಟೆಯಾದರೂ ಬಸ್ ಹೊರಡದಿರುವುದಕ್ಕೆ ಬೇಸರಗೊಂಡ ಡಾಕ್ಟರ್, ಚಾಲಕ ಮತ್ತು ನಿರ್ವಾಹಕರನ್ನು ಪ್ರಶ್ನಿಸಿದರೆ, ಇನ್ನೂ 10 ಟಿಕೆಟ್ ಬಾಕಿ ಇದೆ. ಅದನ್ನು ನೀವೆ ಖರೀದಿಸಿ. ಆಗ ಹೋಗೋಣ ಎಂದು ವ್ಯಂಗ್ಯ ಮಾಡಿದ್ದಾರೆ ಎಂದು ಡಾಕ್ಟರ್ ಪಟೇಲ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News