ಕೋಟಿ ನಿಧನಕ್ಕೆ ಉಮಾಶ್ರೀ ಸಂತಾಪ
Update: 2017-11-23 14:29 GMT
ಬೆಂಗಳೂರು, ನ.23: ಹಿರಿಯ ಪತ್ರಕರ್ತ, ಆಂದೋಲನ ಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಸಂತಾಪ ವ್ಯಕ್ತಪಡಿಸಿದ್ದಾರೆ.
ಆಂದೋಲನ ಪತ್ರಿಕೆಯನ್ನು ಪ್ರಭಾವಿ ಪತ್ರಿಕೆಯನ್ನಾಗಿ ರೂಪಿಸುವಲ್ಲಿ ಸಂಪಾದಕ ರಾಜಶೇಖರ ಕೋಟಿ ಶ್ರಮ ಸ್ಮರಣೀಯ. ನೇರ ಮತ್ತು ನಿಷ್ಠುರ ಬರಹಗಳಿಂದ ಪತ್ರಿಕೆಯನ್ನು ಸಮಾಜಮುಖಿಯಾಗಿ ಬೆಳೆಸಿದ ಅವರು, ಕನ್ನಡ ಪತ್ರಿಕೋದ್ಯಮಕ್ಕೆ ಮಾದರಿಯಾಗಿದ್ದರು. ಅವರ ನಿಧನ ಕನ್ನಡ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟವೆಂದು ಅವರು ಶೋಕ ವ್ಯಕ್ತಪಡಿಸಿದ್ದಾರೆ.