ಉಗ್ರ ಪಟ್ಟಿಯಿಂದ ಹೆಸರು ತೆಗೆಯಿರಿ: ವಿಶ್ವಸಂಸ್ಥೆಗೆ ಸಯೀದ್ ಮನವಿ

Update: 2017-11-28 17:25 GMT

ಲಾಹೋರ್, ನ. 28: ಘೋಷಿತ ಭಯೋತ್ಪಾದಕರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆಯಬೇಕು ಎಂದು ಕೋರಿ ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ಹಾಗೂ ಪಾಕಿಸ್ತಾನದ ಲಷ್ಕರ್ ಎತೊಯ್ಬಾ ಭಯೋತ್ಪಾದನೆ ಸಂಘಟನೆಯ ಮುಖ್ಯಸ್ಥ ಹಫೀಝ್ ಸಯೀದ್ ವಿಶ್ವಸಂಸ್ಥೆಗೆ ಮನವಿ ಸಲ್ಲಿಸಿದ್ದಾನೆ.

 ಭಯೋತ್ಪಾದನೆ ಅಥವಾ ಇತರ ಯಾವುದೇ ಪ್ರಕರಣಗಳಿಗೆ ಸಂಬಂಧಿಸಿ ತನ್ನ ವಿರುದ್ಧದ ಯಾವುದೇ ಆರೋಪಗಳು ಪಾಕಿಸ್ತಾನದ ನ್ಯಾಯಾಲಯಗಳಲ್ಲಿ ಸಾಬೀತಾಗಿಲ್ಲ ಎಂದು ಅವನು ಹೇಳಿದ್ದಾನೆ.

ಆತನನ್ನು ಯಾವುದೇ ಪ್ರಕರಣದಲ್ಲಿ ಬಂಧಿಸದಿರಲು ಪಾಕಿಸ್ತಾನ ಸರಕಾರ ನಿರ್ಧರಿಸಿದ ಬಳಿಕ, ಸಯೀದ್ ಶುಕ್ರವಾರ ಬಂಧಮುಕ್ತಗೊಂಡಿದ್ದಾನೆ. ಅವನು ಈ ವರ್ಷದ ಜನವರಿಯಿಂದ ಗೃಹಬಂಧನದಲ್ಲಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News