ಆಪ್‌ನ ಪಂಜಾಬ್ ಉಸ್ತುವಾರಿಯಾಗಿ ಮನೀಶ್ ಸಿಸೋಡಿಯಾ

Update: 2017-12-19 14:22 GMT

ಗುಜರಾತ್, ಡಿ. 19: ಆಪ್ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಪಕ್ಷದ ಪಂಜಾಬ್‌ನ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.ಎಪ್ರಿಲ್‌ನಲ್ಲಿ ಪಕ್ಷದ ರಾಜ್ಯ ವರಿಷ್ಠನ ಸ್ಥಾನಕ್ಕೆ ಸಂಜಯ್ ಸಿಂಗ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸಿಸೋಡಿಯಾ ಅವರನ್ನು ಪ್ರಭಾರಿಯನ್ನಾಗಿ ನಿಯೋಜಿಸಲು ರಾಜಕೀಯ ವ್ಯವಹಾರಗಳ ಸಮಿತಿ ನಿರ್ಧರಿಸಿದೆ. ಪಂಜಾಬ್‌ನಲ್ಲಿ ಸಮರ್ಥ ವೀಕ್ಷಕರಿಲ್ಲ ಎಂದು ಪಕ್ಷದ ವರಿಷ್ಠರು ತಿಳಿಸಿದ್ದಾರೆ.

ಪಂಜಾಬ್‌ನಲ್ಲಿ ಕಳೆದ ಶನಿವಾರ ಮುನ್ಸಿಪಲ್ ಚುನಾವಣೆ ನಡೆಯಿತು. 414 ವಾರ್ಡ್‌ಗಳಲ್ಲಿ ಆಪ್ ಕೇವಲ 1 ವಾರ್ಡ್‌ನಲ್ಲಿ ಮಾತ್ರ ಜಯ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News