ಮೂರು ತಿಂಗಳಲ್ಲಿ ಪಳನಿಸ್ವಾಮಿ ಸರಕಾರದ ಪತನ: ದಿನಕರನ್

Update: 2017-12-24 15:45 GMT

ಚೆನ್ನೈ,ಡಿ.24: ನಾವೇ ನಿಜವಾದ ಎಐಎಡಿಎಂಕೆ ಪಕ್ಷವಾಗಿದ್ದೇವೆ. ಆರ್.ಕೆ.ನಗರದ ಜನರು ಅಮ್ಮ(ಜಯಲಲಿತಾ)ನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಮದುರೈನಲ್ಲಿದ್ದ ದಿನಕರನ್ ಸುದ್ದಿಗಾರರಿಗೆ ತಿಳಿಸಿದರು.

ಇ.ಪಳನಿಸ್ವಾಮಿ ಸರಕಾರವು ಮೂರು ತಿಂಗಳಲ್ಲಿ ಉರುಳಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಜಯಲಲಿತಾರ ಆಪ್ತ ಗೆಳತಿ ವಿ.ಕೆ.ಶಶಿಕಲಾರ ನಿಕಟ ಸಂಬಂಧಿಯಾಗಿರುವ ದಿನಕರನ್ ಅದೇ ಬಲದಲ್ಲಿ ಜಯಾರ ಪರಂಪರೆಯ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸಿ ಕೊನೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News