ಅಪಹರಣ ಪ್ರಕರಣ: ಯುವಕನ ಬಂಧನ
Update: 2018-01-13 14:32 GMT
ಬೆಂಗಳೂರು, ಜ.13: ಉದ್ಯಮಿಯೊಬ್ಬರ ಪುತ್ರಿಯೊಬ್ಬರನ್ನು ಅಪಹರಿಸಿದ ಆರೋಪದ ಮೇಲೆ ಯುವಕನೊಬ್ಬನನ್ನು ಇಲ್ಲಿನ ಕಬ್ಬನ್ಪಾರ್ಕ್ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ.
ಬಂಧಿತ ಆರೋಪಿಯನ್ನು ಸುಧಾಕರ ರೆಡ್ಡಿ ಎಂದು ಗುರುತಿಸಿಲಾಗಿದ್ದು, ಉದ್ಯಮಿಯೊಬ್ಬರ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ್ದ ಎಂದು ತಿಳಿದುಬಂದಿದೆ.