ಕರ್ನಾಟಕ ಬಂದ್‌ ಕರೆ ಹಿನ್ನೆಲೆ: ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳ ಮುಂದೂಡಿಕೆ

Update: 2018-01-23 14:25 GMT

ಬೆಂಗಳೂರು, ಜ.23: ಮಹದಾಯಿ ವಿವಾದವನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಜ.25ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಂದು ನಡೆಯಬೇಕಾದ ಬೆಂಗಳೂರು ವಿವಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಅದರಂತೆ, ಪ್ರಥಮ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎಂ ಪರೀಕ್ಷೆಯನ್ನು ಫೆ.8, ಅಂತಿಮ ಬಿಎ ಹಾಗೂ ಬಿಎಸ್ಸಿ ಪರೀಕ್ಷೆಯನ್ನು ಫೆ.5 ಹಾಗೂ ಬಿಕಾಂ ಮತ್ತು ಬಿಬಿಎಂ ಪರೀಕ್ಷೆಯನ್ನು ಜ.31, ಎಂಎ, ಎಂಎಸ್ಸಿ ಪರೀಕ್ಷೆಯನ್ನು ಫೆ.2 ಹಾಗೂ ಎಂಕಾಂ ಪರೀಕ್ಷೆಯನ್ನು ಫೆ.8 ಹಾಗೂ ಸ್ವಾತಕೋತ್ತರ ಡಿಬಿಎ, ಡಿಎಚ್‌ಆರ್‌ಎಂ, ಡಿಎಂಎಂ, ಡಿಎಚ್‌ಎ ಪರೀಕ್ಷೆಗಳನ್ನು ಜ.31ಕ್ಕೆ ನಡೆಸಲಾಗುವುದು ಎಂದು ವಿವಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News