ಕಾಸ್ಗಂಜ್: ಮಸೀದಿಯ ಬಾಗಿಲಿಗೆ ಬೆಂಕಿಹಚ್ಚಿದ ದುಷ್ಕರ್ಮಿಗಳು

Update: 2018-02-05 10:58 GMT

ಲಕ್ನೋ, ಫೆ.5: ಇತ್ತೀಚೆಗಷ್ಟೇ ಕೋಮುಗಲಭೆಗೆ ತುತ್ತಾಗಿದ್ದ ಉತ್ತರ ಪ್ರದೇಶದ ಕಾಸ್ಗಂಜ್ ನಲ್ಲಿ ದುಷ್ಕರ್ಮಿಗಳು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಇಲ್ಲಿನ ಮಸೀದಿಯೊಂದರ ಬಾಗಿಲಿಗೆ ಬೆಂಕಿ ಹಚ್ಚಲಾಗಿದೆ.

ಸಬ್ಝಿ ಮಂಡಿ ಸಮೀಪ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಯ ಮಾಹಿತಿ ಲಭಿಸುತ್ತಿದ್ದಂತೆ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕಾಗಮಿಸಿದ್ದು, ಆಕ್ರೋಶಿತ ಜನರ ಮನವೊಲಿಸಿದ್ದಾರೆ.

ಗಣರಾಜ್ಯೋತ್ಸವದ ದಿನ ಸಂಘಪರಿವಾರ ಹಮ್ಮಕೊಂಡಿದ್ದ ‘ತಿರಂಗಾ ಯಾತ್ರೆ’ಯ ಸಂದರ್ಭ ಕಾಸ್ಗಂಜ್ ನಲ್ಲಿ ಗಲಭೆ ಶುರುವಾಗಿತ್ತು. ಹಿಂಸಾಚಾರದಲ್ಲಿ ಒಬ್ಬ ಯುವಕ ಮೃತಪಟ್ಟಿದ್ದ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News