ಬೆಂಗಳೂರು: ಇಬ್ಬರು ಪುಟ್ಟ ಕಂದಮ್ಮಗಳಿಗೆ ಬೆಂಕಿ ಹಚ್ಚಿ ಮಹಿಳೆ ಆತ್ಮಹತ್ಯೆ
Update: 2018-02-15 09:21 GMT
ಬೆಂಗಳೂರು, ಫೆ. 15: ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಮೂವರು ಸಜೀವದಹನವಾದ ಘಟನೆ ಬೆಂಗಳೂರಿನ ಮಾರತ್ಹಳ್ಳಿ ಸಮೀಪದ ಸಂಜಯ್ನಗರ ಬಳಿ ಗುರುವಾರ ಬೆಳಗ್ಗೆ ನಡೆದಿದೆ.
ಮಕ್ಕಳಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆಗೆ ಶರಣಾದ ತಾಯಿ ರಾಮಲಿಂಗಮ್ಮ, ನಾಲ್ಕು ವರ್ಷದ ಗಂಡು ಮಗು, ಎರಡು ವರ್ಷದ ಹೆಣ್ಣು ಮಗು ಸಜೀವ ದಹನವಾಗಿದ್ದಾರೆ. ರಾಮಲಿಂಗಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಎಚ್ಎಎಲ್ ಠಾಣೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.