ಫೆ.24ರಿಂದ ರಾಹುಲ್ ಗಾಂಧಿ ಮುಂಬೈ ಕರ್ನಾಟಕ ಯಾತ್ರೆ

Update: 2018-02-15 16:40 GMT

ಬೆಂಗಳೂರು, ಫೆ.15: ಹೈ-ಕರ್ನಾಟಕ ಭಾಗದಲ್ಲಿ ಮೂರು ದಿನಗಳ ಕಾಲ ಜನಾರ್ಶೀವಾದ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಫೆ.24ರಿಂದ ಮುಂಬೈ ಕರ್ನಾಟಕ ಯಾತ್ರೆ ಕೈಗೊಳ್ಳಲಿದ್ದಾರೆ.

ಫೆ.24ರಂದು ಚಿಕ್ಕೋಡಿಯಿಂದ ಆರಂಭವಾಗಲಿರುವ ಯಾತ್ರೆಯು ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ರೋಣ, ಬಾದಾಮಿ ಮೂಲಕ ವಿಜಯಪುರದತ್ತ ತೆರಳಲಿದೆ. ಮಾರ್ಗ ಮಧ್ಯ ಗದಗ ಜಿಲ್ಲೆಯ ಕೆಲವು ಗ್ರಾಮಗಳ ಮೂಲಕ ಯಾತ್ರೆ ಸಾಗಲಿದೆ. ಯಾತ್ರೆಯ ವೇಳೆ ಆಯಾ ಭಾಗದ ಜನರ ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News