ಬೆಂಗಳೂರು: ಉಸಿರುಗಟ್ಟಿಸಿ ಪತ್ನಿಯ ಕೊಲೆ

Update: 2018-02-15 16:47 GMT

ಬೆಂಗಳೂರು, ಫೆ.15: ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಇಲ್ಲಿನ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.

ನಗರದ ಮುನೇಶ್ವರ ಬಡಾವಣೆಯ ದೊಡ್ಡಬಿದರಕಲ್ಲು ನಿವಾಸಿ ದೇವಮ್ಮ(30) ಕೊಲೆಯಾದ ಮಹಿಳೆಯಾಗಿದ್ದು, ಚನ್ನಪಟ್ಟಣ ಮೂಲದ ದೇವರಾಜ್ ಎಂಬಾತನನ್ನು ಪ್ರೀತಿಸಿ ದೇವಮ್ಮ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ.

ಪತಿ ದೇವರಾಜ್ ಎರಡನೆ ಪತ್ನಿಯೊಂದಿಗೆ ಮುನೇಶ್ವರ ಬಡಾವಣೆಯ ದೊಡ್ಡಬಿದರಕಲ್ಲಿನಲ್ಲಿಯೇ ವಾಸವಾಗಿದ್ದು, ದೇವಮ್ಮನ ಮನೆಗೂ ಬಂದು ಹೋಗುತ್ತಿದ್ದನು. ಬುಧವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ದೇವಮ್ಮಳೊಂದಿಗೆ ಜಗಳವಾಗಿ ಬಟ್ಟೆಯಲ್ಲಿ ಸುತ್ತಿ ಆಕೆಯನ್ನು ಉಸಿರುಗಟ್ಟಿಸಿ ಕೊಲೆಗೈದಿರುವುದಾಗಿ ಹೇಳಲಾಗುತ್ತಿದೆ.

ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸ್ಥಳಾಂತರಿಸಿ ಆರೋಪಿಯನ್ನು ವಶಕ್ಕೆ ಪಡೆದು ತನಿಖೆಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News