ಕಾಮಗಾರಿಗಳ ಬಾಕಿ ಬಿಲ್ಲುಗಳ ಬಿಡುಗಡೆಗೆ ಕ್ರಮ: ಡಾ.ಎಚ್.ಸಿ.ಮಹದೇವಪ್ಪ
Update: 2018-02-20 14:24 GMT
ಬೆಂಗಳೂರು, ಫೆ.20: ಆಯವ್ಯಯದಲ್ಲಿ ಒದಗಿಸಿರುವ ಅನುದಾನ ಹಾಗೂ ಪೂರಕ ಅಂದಾಜುಗಳಲ್ಲಿ ಹೆಚ್ಚುವರಿ ಅನುದಾನ ಪಡೆದುಕೊಂಡು ಬಾಕಿ ಬಿಲ್ಲುಗಳ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಡಾ. ಎಚ್.ಸಿ ಮಹದೇವಪ್ಪ ತಿಳಿಸಿದ್ದಾರೆ.
ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಸದಸ್ಯ ಸುನೀಲ್ ಸುಬ್ರಮಣ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿ ಸಚಿವರು, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲಿ ಕಾಮಗಾರಿಗಳು ಪೂರ್ಣಗೊಂಡು ಬಿಲ್ಲು ಪಾವತಿಗೆ ಬಾಕಿ ಇರುವ ಪ್ರಕರಣಗಳಿವೆ. ಜನವರಿ 2018 ರ ಅಂತ್ಯಕ್ಕೆ ಪಾವತಿಗೆ ಬಾಕಿಯಿರುವ ಬಿಲ್ಲುಗಳ ಮೊತ್ತ 2268.28 ಕೋಟಿ ರೂ. ಇದರಲ್ಲಿ 2018ರ ಫೆಬ್ರವರಿಯಲ್ಲಿ 582.50 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಪ್ರಸ್ತುತ 1685.78 ಕೋಟಿ ರೂ ಬಿಲ್ಲುಗಳು ಬಾಕಿ ಉಳಿದಿವೆ ಎಂದು ಹೇಳಿದರು.