ಪೊಲೀಸ್ ಕಚೇರಿಗಳಲ್ಲ, ಕಾಂಗ್ರೆಸ್ ಕಚೇರಿ: ಆರ್.ಅಶೋಕ್

Update: 2018-02-20 16:46 GMT

ಬೆಂಗಳೂರು, ಫೆ.20: ಶಾಸಕ ಎನ್.ಎ.ಹಾರಿಸ್ ಪುತ್ರನಿಗೆ ಫೈ ಸ್ಟಾರ್ ಹೊಟೇಲ್‌ನಿಂದ ಊಟ ತರಿಸಿ ಕೊಡಲಾಗುತ್ತಿದ್ದು, ಬಹುತೇಕ ಪೊಲೀಸ್ ಕಚೇರಿಗಳು ಇಂದು ಕಾಂಗ್ರೆಸ್ ಕಚೇರಿಗಳಾಗುತ್ತಿವೆ ಎಂದು ಬಿಜೆಪಿ ಶಾಸಕ ಆರ್.ಅಶೋಕ್ ಆರೋಪಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಜನ ಸಾಮಾನ್ಯರು ನಿಶ್ಚಿಂತೆಯಿಂದ ಬದುಕುವುದೆ ಕಷ್ಟವಾಗಿದೆ. ಹೊಟೇಲ್‌ಗಳಿಗೆ ಹೋಗಲು ಹೆದರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯವನ್ನು ರಕ್ಷಿಸುವಂತೆ ಕೋರಿ ಕೇಂದ್ರ ಗೃಹಸಚಿವರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದರು.

ನಲಪಾಡ್ ಹಲ್ಲೆ ಪ್ರಕರಣ ಒಂದೆಡೆಯಾದರೆ, ಮತ್ತೊಂದೆಡೆ ಕಾಂಗ್ರೆಸ್ ಮುಖಂಡ ನಾರಾಯಣ ಸ್ವಾಮಿ ಎಂಬಾತ ಬಿಬಿಎಂಪಿ ಕಚೇರಿಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ಕಾಂಗ್ರೆಸ್ ಮುಖಂಡರಿಂದ ಪುಂಡಾಟಿಕೆ ದಿನೇ ದಿನೇ ಹೆಚ್ಚುತ್ತಿದೆ. ಅಂಥವರ ಪರ ಸರಕಾರ ನಿಂತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News