ಬೆಂಗಳೂರು: ವಿಕಲಚೇತನ ಕ್ರೀಡಾಪಟುಗಳಿಗೆ ಸನ್ಮಾನ

Update: 2018-03-15 18:01 GMT

ಬೆಂಗಳೂರು, ಮಾ. 15: ಅಂಗವಿಕಲ ದಿನಾಚರಣೆ ಅಂಗವಾಗಿ ಅರ್ಜುನ ಪ್ರಶಸ್ತಿ ವಿಜೇತ ವಿಕಲಚೇತನ ಕ್ರೀಡಾಪಟು ರಮೇಶ್ ಟಿಕಾರಾಂ ಸೇರಿದಂತೆ ಐದು ಜನ ವಿಕಲಚೇತನ ಕ್ರೀಡಾಪಟುಗಳಿಗೆ ಸಿಆರ್‌ಐಎಸ್ಪಿ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.

ಗುರುವಾರ ನಗರದ ಕಬ್ಬನ್‌ಪಾರ್ಕ್‌ನ ಎಡ್ವರ್ಡ್ ಪ್ರತಿಮೆ ಮುಂಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಆರ್‌ಐಎಸ್ಪಿಸಂಘಟನೆಯ ಪದಾಧಿಕಾರಿಗಳು ಅಂಗವಿಕಲ ದಿನಾಚರಣೆ ಆಚರಿಸಿದರು. ಇದೇ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಮೂವತ್ತಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪದಕ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ವಿಕಲಚೇತನ ಕ್ರೀಡಾಪಟು ರಮೇಶ್ ಟಿಕಾರಾಂ, 22 ಅಂತಾರಾಷ್ಟ್ರೀಯ ಪದಕ ವಿಜೇತ ಕ್ರೀಡಾಪಟು ಪ್ರಕಾಶ್, ಅಂತಾರಾಷ್ಟ್ರೀಯ ಅಥ್ಲೀಟ್ ಅನ್ನಪೂರ್ಣ, ಪ್ಯಾರಾ ಒಲಿಂಪಿಕ್ ವಿಜೇತೆ ಶಾಹೀನಾ ಸೇರಿದಂತೆ ಮಂಜುನಾಥ್ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News