ಎಸ್.ಡಿ.ಪಿ.ಐ.ಯಿಂದ ಪುದುವಿನಲ್ಲಿ ಚುನಾವಣಾ ಸಿದ್ಧತಾ ಸಭೆ

Update: 2018-04-04 06:58 GMT

ಫರಂಗಿಪೇಟೆ, ಎ.4: ಎಸ್.ಡಿ.ಪಿ.ಐ. ಪಕ್ಷದ  ವತಿಯಿಂದ ವಿಧಾನಸಭಾ ಚುನಾವಣೆಗೆ ಮಂಗಳೂರು ಕ್ಷೇತ್ರ ವ್ಯಾಪ್ತಿಯ ಪುದು ಗ್ರಾಮದ ಕಾರ್ಯಕರ್ತರ ಸಭೆ ಮಂಗಳವಾರ ರಾತ್ರಿ ಪಕ್ಷದ ಕಚೇರಿಯಲ್ಲಿ ನಡೆಯಿತು.

ಕಾರ್ಯಕರ್ತರನ್ನು ಉದ್ದೇಶಿಸಿ ಪಕ್ಷದ ಚುನಾವಣಾ ಉಸ್ತುವಾರಿ ಸಿದ್ದೀಕ್ ಕಲ್ಲಡ್ಕ ಮಾತನಾಡಿದರು.

ಪಕ್ಷದ ವಲಯ ಅಧ್ಯಕ್ಷ ಸುಲೈಮಾನ್ ಉಸ್ತಾದ್, ಗ್ರಾಮ ಸಮಿತಿಯ ಅಧ್ಯಕ್ಷ ಇಕ್ಬಾಲ್, ಪುದು ಗ್ರಾಪಂ ಸದಸ್ಯ ನಝೀರ್, ಸಲೀಂ ಕೆ., ಶರೀಫ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News