ಬೆಂಗಳೂರು: ಸುದ್ದಿಗೋಷ್ಟಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೌಡಿ ನಾಗರಾಜ್

Update: 2018-04-06 12:38 GMT

ಬೆಂಗಳೂರು, ಎ. 6: ಪ್ರೆಸ್ ಕ್ಲಬ್ ನ ಸುದ್ದಿಗೋಷ್ಟಿಯಲ್ಲೇ ರೌಡಿ ನಾಗರಾಜ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ.ಜಾರ್ಜ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನನ್ನ ಈ‌ ನಿರ್ಧಾರಕ್ಕೆ ಕಾರಣ ಎಂದು ನಾಗರಾಜ್ ಆರೋಪ ಮಾಡಿದ್ದಾರೆ. ಜಾರ್ಜ್ ಮತ್ತು ದಿನೇಶ್ ಗುಂಡೂರಾವ್ ರಿಂದ ತನ್ನ ಕುಟುಂಬಕ್ಕೆ‌ ಕಿರುಕುಳವಾಗುತ್ತಿದೆ. ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ರೌಡಿ ನಾಗರಾಜ್ ಆರೋಪ ಮಾಡಿದ್ದಾರೆ. 

ನಾಗರಾಜನನ್ನು ಪೊಲೀಸರು ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News