​ಬೆಂಗಳೂರು: ಪಿಸ್ತೂಲ್ ಮಾರಾಟ ಯತ್ನ; ಇಬ್ಬರ ಸೆರೆ

Update: 2018-04-13 13:55 GMT

ಬೆಂಗಳೂರು, ಎ.13: ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ನಾಡ ಪಿಸ್ತೂಲು, ಗುಂಡುಗಳನ್ನು ಮಾರಾಟಕ್ಕೆ ಮುಂದಾಗಿದ್ದ ಆರೋಪ ಪ್ರಕರಣಕ್ಕೆ ಸಂಬಂಧ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಗರದ ಭೂಪಸಂದ್ರದ ರೈಲ್ವೇಗೇಟ್ ನಿವಾಸಿಗಳಾದ ರಫೀಕ್(28) ಹಾಗೂ ಅಬೂಬಕರ್(26) ಬಂಧಿತ ಆರೋಪಿಗಳೆಂದು ಸಿಸಿಬಿ ತಿಳಿಸಿದೆ.

ಪ್ರಕರಣದ ವಿವರ: ಭೂಪಸಂದ್ರ ವ್ಯಾಪ್ತಿಯಲ್ಲಿ ಇಬ್ಬರು ಪಿಸ್ತೂಲು ಇಟ್ಟುಕೊಂಡು ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತ ರಫೀಕ್ ವಿರುದ್ಧ ಈಗಾಗಲೇ ಮೂರು ಕೊಲೆ ಪ್ರಯತ್ನ ಹಾಗೂ ಒಂದು ಕೊಲೆ, ಕಳವು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ.

ಬಂಧಿತರಿಂದ ಒಂದು ಪಿಸ್ತೂಲು, ಮೂರು ಜೀವಂತ ಗುಂಡು, ಮೊಬೈಲ್ ವಶಕ್ಕೆ ಪಡೆದು, ಇಲ್ಲಿನ ಸಂಜಯ್‌ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News