ಗೌರಿ ಲಂಕೇಶ್ ಹತ್ಯೆ ಪ್ರಕರಣ: ಮಂಪರು ಪರೀಕ್ಷೆ ಬೇಡವೆಂದು ಆರೋಪಿ ನವೀನ್ ಕುಮಾರ್ ಪತ್ರ

Update: 2018-04-15 11:58 GMT

ಬೆಂಗಳೂರು, ಎ.15: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಶಂಕಿತ ಆರೋಪಿ ಸಂಘಪರಿವಾರದ ಕಾರ್ಯಕರ್ತ ನವೀನ್ ಕುಮಾರ್ ಮಂಪರು ಪರೀಕ್ಷೆ ಬೇಡವೆಂದು ನ್ಯಾಯಾಧೀಶರಿಗೆ ಪತ್ರ ಬರೆದಿರುವುದಾಗಿ ತಿಳಿದುಬಂದಿದೆ.

ಈಗಾಗಲೇ ಸಿಟ್ ತನಿಖಾಧಿಕಾರಿಗಳು, ನ್ಯಾಯಾಂಗ ಬಂಧನದಲ್ಲಿಟ್ಟು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಈತ ಜೈಲಿನಿಂದಲೇ ನ್ಯಾಯಾಧೀಶರಿಗೆ ಮತ್ತು ಜೈಲು ಅಧೀಕ್ಷಕರಿಗೆ ಕೂಡ ಪತ್ರ ಬರೆದಿದ್ದಾನೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಆರೋಪಿಯನ್ನು ಮಂಪರು ಪರಿಕ್ಷೆ ಮಾಡಲು ನ್ಯಾಯಾಲಯ ಹೇಳಿದಾಗ ಅದಕ್ಕೆ ಆರೋಪಿಯೂ ಒಪ್ಪಿಕೊಂಡಿದ್ದ.ಆದರೆ, ಇದೀಗ ಪತ್ರಬರೆದು, ನನಗೆ ಇಷ್ಟ ಇಲ್ಲದಿದ್ದರೂ ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸಿಟ್ ತನಿಖಾಧಿಕಾರಿಗಳ ಬೆದರಿಕೆ ಹಿನ್ನೆಲೆ ಮಂಪರು ಪರೀಕ್ಷೆ ನಡೆಸಲು ಒಪ್ಪಿಕೊಂಡಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News