ಬೆಂಗಳೂರು: ಗೂಡ್ಸ್ ವಾಹನ ಢಿಕ್ಕಿ; ಪೊಲೀಸ್ ಪೇದೆ ಮೃತ್ಯು
Update: 2018-04-15 15:42 GMT
ಬೆಂಗಳೂರು, ಎ.15: ಶರವೇಗವಾಗಿ ಬಂದ ಗೂಡ್ಸ್ ವಾಹನಯೊಂದು ಪೊಲೀಸ್ ಪೇದೆಯೊಬ್ಬರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಕುಂಬಳಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಡದಿ ಪೊಲೀಸ್ ಠಾಣೆಯ ಪೇದೆ ಮಹಾಲಿಂಗ(39) ಎಂಬುವರು ಮೃತಪಟ್ಟಿದ್ದು, ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಚೆಕ್ಪೋಸ್ಟ್ನಲ್ಲಿ ಕಾರು ತಪಾಸಣೆ ನಡೆಸುವ ವೇಳೆ ವೇಗವಾಗಿ ಬಂದ ಗೂಡ್ಸ್ ವಾಹನ ಢಿಕ್ಕಿ ಹೊಡೆದಿದೆ.
ಘಟನೆಯಲ್ಲಿ ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಮಹಾಲಿಂಗ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಅಪಘಾತವೆಸಗಿದ ವಾಹನದ ಚಾಲಕ ಪರಾರಿಯಾಗಿದ್ದು , ಪ್ರಕರಣ ದಾಖಲಿಸಿರುವ ಕುಂಬಳಗೂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.