ನೀವು ಮಾಧ್ಯಮಗಳಿಗೆ 'ಮಸಾಲೆ'ಗಳನ್ನು ನೀಡಬೇಡಿ: ಬಿಜೆಪಿ ಶಾಸಕ, ಸಂಸದರಿಗೆ ಮೋದಿ ಎಚ್ಚರಿಕೆ

Update: 2018-04-22 13:40 GMT

ಹೊಸದಿಲ್ಲಿ, ಎ.22: ಬಿಜೆಪಿ ಶಾಸಕರು ಹಾಗು ಸಂಸದರ ಜೊತೆ ನರೇಂದ್ರ ಮೋದಿ ಆ್ಯಪ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಮಾಧ್ಯಮಗಳ ಮುಂದೆ ವಿವಾದಾತ್ಮಕ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದರು.

“ನಾವು ತಪ್ಪುಗಳನ್ನು ಮಾಡಿ ಮಾಧ್ಯಮದವರಿಗೆ ‘ಮಸಾಲೆ’ ನೀಡುತ್ತೇವೆ. ಕ್ಯಾಮರಾ ನೋಡಿದ ತಕ್ಷಣ ನಾವು ಪ್ರಸಿದ್ಧ ಸಾಮಾಜಿಕ ವಿಜ್ಞಾನಿಗಳಂತೆ ಅಥವಾ ಪರಿಣಿತರಂತೆ ಹೇಳಿಕೆಗಳನ್ನು ನೀಡುತ್ತೇವೆ. ಸಾಮಾಜಿಕ ಜಾಲತಾಣವನ್ನು ಸಂಪೂರ್ಣವಾಗಿ ಜನರೊಂದಿಗೆ ಸಂಪರ್ಕ ಸಾಧಿಸಲು ಬಳಸಬೇಕು” ಎಂದವರು ಹೇಳಿದರು.

“ಇಂತಹ ಹೇಳಿಕೆಗಳಿಂದ ಪಕ್ಷದ ಇಮೇಜ್ ಗೆ ಧಕ್ಕೆಯಾಗುತ್ತದೆ. ಇದು ಮಾಧ್ಯಮಗಳ ತಪ್ಪಲ್ಲ” ಎಂದವರು ಹೇಳಿದರು. ಇತ್ತೀಚಿನ ದಿನಗಳಲ್ಲಿ ಬಿಜೆಪಿ ನಾಯಕರು ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಇಂಟರ್ ನೆಟ್ ಬಗ್ಗೆ ತ್ರಿಪುರಾ ಸಿಎಂ ನೀಡಿದ್ದ ಹೇಳಿಕೆಯೊಂದು ಭಾರೀ ಸುದ್ದಿಯಾಗಿತ್ತು. ಮಹಾಭಾರತ ಕಾಲದಲ್ಲೇ ಇಂಟರ್ ನೆಟ್, ಉಪಗ್ರಹಗಳಿತ್ತು ಎಂದವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News