ಬೆಂಗಳೂರು: ಕೊಲೆ ಆರೋಪಿಯ ಸೆರೆ

Update: 2018-04-23 14:54 GMT

ಬೆಂಗಳೂರು, ಎ.23: ಸಾಲ ತೀರಿಸುವ ಸಲುವಾಗಿ ಸ್ನೇಹಿತನ ಅಕ್ಕನನ್ನು ಕೊಲೆಗೈದು ಮಾಂಗಲ್ಯ ಸರ ಕಳವು ಮಾಡಿದ್ದ ಆರೋಪಿಯನ್ನು ಒಂದೇ ದಿನದಲ್ಲಿ ಇಲ್ಲಿನ ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ದೊಡ್ಡಬಳ್ಳಾಪುರ ತಾಲೂಕು ಪಾಲನಜೋಗಿಹಳ್ಳಿ ನಿವಾಸಿ ರಮೇಶ್(33) ಬಂಧಿತ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ತನ್ನ ಸ್ನೇಹಿತ ಹುಣಸಮಾರನಹಳ್ಳಿಯ ಜಗದೀಶ್ ಅವರ ಸಹೋದರಿ ಚಂದ್ರಕಲಾ ಅವರ ಮನೆಗೆ ನುಗ್ಗಿ ಕತ್ತು ಹಿಸುಕಿ, ಬಾಯಿ ಮತ್ತು ಮೂಗನ್ನು ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದನು. ತದನಂತರ ಚಂದ್ರಕಲಾ ಅವರ ಕೊರಳಲಿದ್ದ ಚಿನ್ನದ ಮಾಂಗಲ್ಯ ಸರವನ್ನು ತೆಗೆದುಕೊಂಡು ಹೋಗಿ ಅಂದೇ ತನ್ನ ಸ್ನೇಹಿತೆಯ ಸಹಾಯದಿಂದ ದೇವನಹಳ್ಳಿಯ ಮಣಪುರಂ ಫೈನಾನ್ಸ್‌ನಲ್ಲಿ ಅಡವಿಟ್ಟು 1.20 ಲಕ್ಷ ರೂ. ಪಡೆದಿದ್ದನು ಎನ್ನಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಹಣ ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News