ರಾಜ್ಯದಲ್ಲಿ ಬಿಜೆಪಿ ಪ್ರಚಾರದ ಭರಾಟೆ ಮತ್ತಷ್ಟು ಹೆಚ್ಚು

Update: 2018-05-02 12:43 GMT

ಬೆಂಗಳೂರು, ಮೇ 2: ಚುನಾವಣೆಗೆ ಹತ್ತು ದಿನ ಬಾಕಿಯಿರುವಂತೆ ಬಿಜೆಪಿ ಚುನಾವಣಾ ಪ್ರಚಾರದ ಭರಾಟೆ ಹೆಚ್ಚಿಸಿದ್ದು, ಮೇ.3 ರಿಂದ ಯಿಂದ ಪ್ರಧಾನಿ ಮೋದಿ ಸೇರಿದಂತೆ ರಾಷ್ಟ್ರನಾಯಕರ ದಂಡು ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಲಿದ್ದಾರೆ.

ಗುರುವಾರ ಬೆಂಗಳೂರು, ಕಲಬುರ್ಗಿ, ಬಳ್ಳಾರಿಯಲ್ಲಿ ಆಯೋಜಿಸಿರುವ ಬಿಜೆಪಿ ಸಮಾವೇಶಗಳಲ್ಲಿ ಪ್ರಧಾನಿ ನರೆಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಗುರುವಾರದಿಂದ ಶಿರಸಿ, ಸಾಗರ, ಬಾಳೆಹೊನ್ನೂರು, ಬೇಲೂರು, ಹೊನ್ನಾಳ್ಳಿ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಮೇ 4ರಂದು ಹಳಿಯಾಳ, ಮುದ್ದೇಬಿಹಾಳ, ಮುಧೋಳ್, ತೇರದಾಳ ಹಾಗೂ ಮೇ 5ರಂದು ಸೇಡಂ, ಬಾಲ್ಕಿಗಳಲ್ಲಿ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೇ 5ರಿಂದ ರಾಜ್ಯದಲ್ಲಿ ಪ್ರವಾಸ ನಡೆಸಲಿದ್ದಾರೆ. ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಮೇ 5ರಂದು ಕಲಬುರ್ಗಿ ಗ್ರಾಮೀಣ, ಚಿತ್ತಾಪುರ್, ಚಿಂಚೊಳಿ, ಅಫ್ಜಲ್‌ಪುರ್‌ಗಳಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಅವರು ಶೋಭಾ ಕರಂದ್ಲಾಜೆ ತಿಳಿಸಿದರು.

ಮಾಜಿ ಸಚಿವ ಶ್ರೀರಾಮಲು ಹಾಗೂ ಜನಾರ್ದನರೆಡ್ಡಿ ಆಪ್ತ ಸ್ನೇಹಿತರು. ಹೀಗಾಗಿ ಶ್ರೀರಾಮಲು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಮಾತ್ರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಅದನ್ನು ಹೊರತುಪಡಿಸಿ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿಲ್ಲ.
-ಶೋಭಾ ಕರಂದ್ಲಾಜೆ ಸಂಸದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News