ಗುಜರಾತ್ ನಲ್ಲಿ ದಲಿತ ವ್ಯಕ್ತಿಯ ಥಳಿಸಿ ಹತ್ಯೆ

Update: 2018-05-21 06:38 GMT

ರಾಜಕೋಟ್, ಮೇ 21: ಫ್ಯಾಕ್ಟರಿ ಮಾಲಕನೊಬ್ಬನ ಅಣತಿಯಂತೆ ಕೆಲ ಅಪರಿಚಿತ ವ್ಯಕ್ತಿಗಳು ದಲಿತನೊಬ್ಬನನ್ನು ಹೊಡೆದು ಸಾಯಿಸಿದ್ದಲ್ಲದೆ, ಆತನ ಪತ್ನಿಗೂ ಮಾರಣಾಂತಿಕವಾಗಿ ಥಳಿಸಿರುವ ಘಟನೆ ರಾಜಕೋಟ್ ನಲ್ಲಿ ನಡೆದಿದೆ. 

ಈ ಘಟನೆಯ ವೀಡಿಯೋ ಕೂಡ ಎಲ್ಲೆಡೆ ಹರಿದಾಡುತ್ತಿದ್ದು, ಅದರಲ್ಲಿ ವ್ಯಕ್ತಿಯೊಬ್ಬನಿಗೆ ಇನ್ನೊಬ್ಬ ಬೆತ್ತವೊಂದರಿಂದ ಹೊಡೆಯುತ್ತಿರುವುದು ಕಾಣಿಸುತ್ತದೆ. ಆತ ಹೊಡೆಯದಿರುವಂತೆ ಅಲವತ್ತುಕೊಂಡರೂ ಆತನಿಗೆ ಸತತವಾಗಿ ಹಲ್ಲೆಗೈಯ್ಯುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ. ಸ್ವಲ್ಪ ಹೊತ್ತಿನ ನಂತರ ಇನ್ನೊಬ್ಬ ಆ ವ್ಯಕ್ತಿಗೆ ಥಳಿಸುತ್ತಿರುವುದೂ ಕಾಣಿಸುತ್ತದೆ.

ಸಂತ್ರಸ್ತನನ್ನು ಮುಕೇಶ್ ವನಿಯಾ ಎಂದು ಗುರುತಿಸಲಾಗಿದೆ. ಆತನ ಪತ್ನಿಯನ್ನೂ ಥಳಿಸಲಾಗಿದೆ ಎಂಬ ಆರೋಪವಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಐದು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ವಡ್ಗಮ್ ಶಾಸಕ ಹಾಗೂ ದಲಿತ ನಾಯಕ ಜಿಗ್ನೇಶ್ ಮೆವಾನಿ ಈ ಬಗ್ಗೆ ಟ್ವೀಟ್ ಮಾಡಿ, ಗುಜರಾತ್ ದಲಿತರಿಗೆ ಸುರಕ್ಷಿತವಲ್ಲ ಎಂದು ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News