ಕಾಂಗ್ರೆಸ್‌ನಿಂದ ನಕಲಿ ಸಿಡಿ ಸೃಷ್ಟಿ: ಡಿ.ವಿ.ಸದಾನಂದಗೌಡ

Update: 2018-05-21 16:02 GMT

ಬೆಂಗಳೂರು, ಮೇ 21: ಯಲ್ಲಾಪುರ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ ಅವರಿಗೆ ಬಿಜೆಪಿ ಆಮಿಷ ಒಡ್ಡಿದೆ ಎಂಬುದಾಗಿ ಕಾಂಗ್ರೆಸ್ ನಕಲಿ ಸಿಡಿ ಸೃಷ್ಟಿಸಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟೀಕಿಸಿದ್ದಾರೆ.

ಸೋಮವಾರ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಪೂರ್ವ ಸಿದ್ಧತೆ ಕುರಿತು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವರಾಮ ಹೆಬ್ಬಾರರಿಗೆ ಬಿಜೆಪಿ ಆಮಿಷ ಒಡ್ಡಿರುವ ಸಿಡಿಯನ್ನು ಬಿಡುಗಡೆ ಮಾಡಿರುವುದಾಗಿ ಕಾಂಗ್ರೆಸ್ ಹೇಳಿದೆ. ಆದರೆ, ಬಿಜೆಪಿ ಕಡೆಯಿಂದ ತಮಗೆ ಯಾವುದೇ ಆಮಿಷ ಕರೆ ಬಂದಿಲ್ಲ ಎಂದು ಹೆಬ್ಬಾರ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ನಕಲಿ ಸಿಡಿಯನ್ನು ಕಾಂಗ್ರೆಸ್ ಸೃಷ್ಟಿಸಿರುವುದು ಸ್ಪಷ್ಟವಾಗಿದೆ. ನಕಲಿ ಸಿಡಿ, ನಕಲಿ ಕಾಂಗ್ರೆಸ್‌ನ ಭಾಗವಾಗಿದೆ. ನಕಲಿ ವೋಟರ್ ಐಡಿ ಸೃಷ್ಟಿಸುವುದು, ಬೋಗಸ್ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವುದು, ನಕಲಿ ಸಿಡಿಗಳನ್ನು ಸೃಷ್ಟಿಸುವುದು ಸೇರಿ ನಕಲಿಯೇ ಕಾಂಗ್ರೆಸ್‌ನ ಕಾರ್ಯಸೂಚಿಯಾಗಿದೆ. ಕಾಂಗ್ರೆಸ್ ಏನೆಂಬುದು ಈ ಮೂಲಕ ಜನರಿಗೆ ಮತ್ತೊಮ್ಮೆ ಗೊತ್ತಾಗಿದೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News