ಸೈನಿಕರಿಗೆ ಸಮವಸ್ತ್ರ, ಶೂಗಳನ್ನು ತಾವೇ ಖರೀದಿಸುವಂತೆ ಹೇಳುತ್ತಿರುವ ಕೇಂದ್ರ ಸರಕಾರ: ರಾಹುಲ್ ಗಾಂಧಿ ಆರೋಪ

Update: 2018-06-06 07:57 GMT

ಹೊಸದಿಲ್ಲಿ, ಜೂ.6: ಕೇಂದ್ರ ಸರಕಾರ ಟೊಳ್ಳು ಘೋಷಣೆಗಳನ್ನು ಮಾತ್ರ ಮಾಡುತ್ತಿದ್ದು ಇನ್ನೊಂದೆಡೆ ಸೈನಿಕರಿಗೆ ತಮ್ಮ ಸಮವಸ್ತ್ರ ಹಾಗೂ ಶೂಗಳನ್ನು ತಾವೇ ಖರೀದಿಸುವಂತೆ ಹೇಳುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.

ಭಾರತೀಯ ಸೇನೆ ಸರಕಾರಿ ಒಡೆತನದ ಕಂಪೆನಿಗಳಿಂದ ಸೈನಿಕರಿಗೆಂದು ತರಿಸಲಾಗುವ ವಸ್ತುಗಳನ್ನು ಶೇ.50ರಷ್ಟು ಕಡಿತಗೊಳಿಸಲಿದೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ರಾಹುಲ್ ಮೇಲಿನಂತೆ ಟ್ವೀಟ್ ಮಾಡಿದ್ದಾರೆ. ವರದಿಯ ಪ್ರಕಾರ ಉಳಿತಾಯವಾದ ಹಣದಿಂದ ಸಣ್ಣ ಯುದ್ಧಕ್ಕಾಗಿ ಅಗತ್ಯವಿರುವ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಮಾಡಲಾಗುವುದು.

ಕೇಂದ್ರ ತುರ್ತು ಪರಿಸ್ಥಿತಿಯ ಸಂದರ್ಭಗಳಿಗೆ ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಲ್ಲ. ಇದಕ್ಕಾಗಿ ಹೆಚ್ಚಿನ ಹಣ ಮೀಸಲಿರಿಸಿದರೆ ಸೈನಿಕರು ತಮ್ಮ ಸಮವಸ್ತ್ರ ಮತ್ತು ಶೂಗಳಿಗಾಗಿ ತಾವೇ ಹಣ ಖರ್ಚು ಮಾಡಬೇಕಿದೆ ಎಂದು ವರದಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News