ಬಿಜೆಪಿಗೆ ರಾಜೀನಾಮೆ ನೀಡಿದ ಘನಶ್ಯಾಮ್ ತಿವಾರಿ

Update: 2018-06-25 11:23 GMT

ಜೈಪುರ್, ಜೂ.25: ಬಿಜೆಪಿಯ ಬಂಡಾಯ ಶಾಸಕ ಹಾಗು ಮಾಜಿ ರಾಜ್ಯ ಸಚಿವ ಘನಶ್ಯಾಮ್ ತಿವಾರಿ ಸೋಮವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ರಾಜೀನಾಮೆ ಪತ್ರವನ್ನು ಈಗಾಗಲೇ ತಿವಾರಿ ಸಲ್ಲಿಸಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಜೊತೆಗೆ ತಿವಾರಿ ಉತ್ತಮ ಸಂಬಂಧ ಹೊಂದಿರಲಿಲ್ಲ. ಹಲವು ವಿಚಾರಗಳಿಗೆ ಸಂಬಂಧಿಸಿ ಈ ಇಬ್ಬರ ನಡುವ ಮನಸ್ತಾಪವಿತ್ತು ಎನ್ನಲಾಗಿದೆ.

ಮುಂದಿನ  ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರನ 'ಭಾರತ್ ವಾಹಿನಿ' ಪಕ್ಷದಲ್ಲಿ ಘನಶ್ಯಾಮ್ ತಿವಾರಿ ಕಣಕ್ಕಿಳಿಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News