ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಬಿಜೆಪಿ ನಾಯಕನ ಬಳಿ ಬುಲೆಟ್ ಪತ್ತೆ

Update: 2018-06-26 15:57 GMT

ಕೊಯಮತ್ತೂರು,ಜೂ.26: ಚೆನ್ನೈಗೆ ಪ್ರಯಾಣಿಸಲಿದ್ದ ತಮಿಳುನಾಡು ಬಿಜೆಪಿ ಘಟಕದ ಕಾರ್ಯದರ್ಶಿ ಜಿ.ಕೆ. ಶಿವಕುಮಾರ ಅವರ ಬ್ಯಾಗಿನಲ್ಲಿ ಬುಲೆಟ್ ಪತ್ತೆಯಾದ ಬಳಿಕ ಮಂಗಳವಾರ ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಗೊಂದಲ ಸೃಷ್ಟಿಯಾಗಿತ್ತು.

ನಿಲ್ದಾಣಕ್ಕೆ ಆಗಮಿಸಿದ ಶಿವಕುಮಾರ ಭದ್ರತಾ ಪರಿಶೋಧನೆಗೊಳಪಟ್ಟಾಗ ಅವರ ಬ್ಯಾಗಿನಲ್ಲಿ ಗುಂಡನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಶಿವಕುಮಾರ ಅವರು ಗುಂಡನ್ನು ಒಯ್ಯಲು ಪರವಾನಗಿ ಹೊಂದಿದ್ದಾರೆ ಎನ್ನುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ತಾನು ಪ್ರಯಾಣಕ್ಕಾಗಿ ಬ್ಯಾಗ್ ಸಿದ್ಧಗೊಳಿಸುವಾಗ ಅದರಲ್ಲಿದ್ದ ಗುಂಡನ್ನು ಗಮನಿಸಿರಲಿಲ್ಲ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

ಗುಂಡನ್ನು ತನ್ನ ಚಾಲಕನಿಗೆ ಹಸ್ತಾಂತರಿಸಿದ ಬಳಿಕ ಅವರಿಗೆ ಪ್ರಯಾಣಕ್ಕೆ ಅವಕಾಶವನ್ನು ಕಲ್ಪಿಸಲಾಯಿತು ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News