ಅತ್ಯಾಚಾರಗಳನ್ನು ತಡೆಯಲು ಶ್ರೀರಾಮನಿಂದಲೂ ಸಾಧ್ಯವಿಲ್ಲ ಎಂದ ಬಿಜೆಪಿ ಶಾಸಕ

Update: 2018-07-08 05:45 GMT

ಬಲ್ಲಿಯಾ, ಜು.8: ಅತ್ಯಾಚಾರ ಪ್ರಕರಣಗಳಿಗೆ ಮೊಬೈಲ್ ಹಾಗು ಪೋಷಕರೇ ಕಾರಣ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಇದೀಗ "ಅತ್ಯಾಚಾರವನ್ನು ತಡೆಯಲು ಶ್ರೀರಾಮನಿಂದಲೂ ಸಾಧ್ಯವಿಲ್ಲ" ಎಂದಿದ್ದಾರೆ.

ಬಲ್ಲಿಯಾದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಇಂತಹ ಘಟನೆಗಳನ್ನು ತಡೆಯಲು ಶ್ರೀರಾಮನಿಗೂ ಸಾಧ್ಯವಿಲ್ಲ ಎಂದು ನಾನು ಹೇಳಬಲ್ಲೆ. ಇದು ನೈಸರ್ಗಿಕ ಮಾಲಿನ್ಯದ ಹಾಗೆ. ಯಾರನ್ನೂ ಬಿಟ್ಟಿಲ್ಲ. ಉಳಿದವರನ್ನೂ ನಮ್ಮ ಕುಟುಂಬ ನಮ್ಮ ಸಹೋದರಿಯರು ಎಂದು ಭಾವಿಸುವುದು ಜನರ ಜವಾಬ್ದಾರಿಯಾಗಿದೆ. ಮೌಲ್ಯಗಳಿಂದ ಇವುಗಳನ್ನು ನಿಯಂತ್ರಿಸಬಹುದೇ ಹೊರತು ಸಂವಿಧಾನದಿಂದ ಅಲ್ಲ" ಎಂದು ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News