ಮೊಬೈಲ್ ಕಳ್ಳತನದ ಶಂಕೆಯಲ್ಲಿ ಯುವಕನನ್ನು ಥಳಿಸಿ ಕೊಂದ ಗುಂಪು

Update: 2018-07-29 09:05 GMT

ಹೊಸದಿಲ್ಲಿ, ಜು.29: ಮೊಬೈಲ್ ಕಳ್ಳರೆಂದು ಶಂಕಿಸಿ 22 ವರ್ಷದ ಯುವಕನೊಬ್ಬನನ್ನು ಗುಂಪೊಂದು ಥಳಿಸಿ ಹತ್ಯೆಗೈದಿರುವ ಘಟನೆ ಗುಜರಾತ್ ನ ದಹೋದ್ ನಲ್ಲಿ ನಡೆದಿದೆ. ಮೃತ ಯುವಕನ ಸ್ನೇಹಿತನಿಗೂ ಗುಂಪು ಥಳಿಸಿದ್ದು, ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಮೊಬೈಲ್ ಕಳ್ಳರೆಂಬ ಶಂಕೆಯಲ್ಲಿ ಈ ಗುಂಪುಹತ್ಯೆ ನಡೆದಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿ ಯಾರನ್ನೂ ಬಂಧಿಸಲಾಗಿಲ್ಲ. ಪೊಲೀಸರು ಸ್ಥಳಕ್ಕೆ ತಲುಪಿದಾಗ ಗುಂಪು ಯುವಕರಿಗೆ ಥಳಿಸುತ್ತಿತ್ತು. ಇಬ್ಬರನ್ನೂ ರಕ್ಷಿಸಲು ಪೊಲೀಸರು ಪ್ರಯತ್ನಿಸಿದ್ದು, ಓರ್ವ ಯುವಕ ಅಜ್ಮಲ್ ವಹೋನಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿರುವ ಭಾರು ಮಾಥುರ್ ನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಬಗ್ಗೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News