ಬಾಲಕಿಯರ ಅತ್ಯಾಚಾರ ಪ್ರಕರಣ: ಮೌನ ಮುರಿದ ನಿತೀಶ್‌ಕುಮಾರ್

Update: 2018-08-03 09:17 GMT

ಪಾಟ್ನಾ, ಆ.3: ಬಿಹಾರದ ಮುಝಾಫರ್‌ಪುರ್‌ದಲ್ಲಿರುವ ಬಾಲಕಿಯರ ವಸತಿ ಗೃಹದಲ್ಲಿ ನಡೆದ ಭೀಕರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಕೊನೆಗೂ ವೌನ ಮುರಿದಿರುವ ಮುಖ್ಯಮಂತ್ರಿ ನಿತೀಶ್‌ಕುಮಾರ್, ‘‘ಈ ಘಟನೆಯು ಸರಕಾರವನ್ನು ತಲೆ ತಗ್ಗಿಸುವಂತೆ ಮಾಡಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲಾಗುವುದು’’ ಎಂದು ಹೇಳಿದ್ದಾರೆ.

 ‘‘ಪ್ರಕರಣವನ್ನು ಸಿಬಿಐಗೆ ವಹಿಸಿಕೊಡಲಾಗಿದೆ. ಪಾಟ್ನಾ ಹೈಕೋರ್ಟ್ ಪ್ರಕರಣದ ಮೇಲೆ ನಿಗಾ ಇಡಬೇಕೆಂದು ನಾನು ಬಯಸುವೆ’’ ಎಂದು ಬಿಹಾರದ ಅಸೆಂಬ್ಲಿ ಹಾಗೂ ಈಗ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಪ್ರತಿಧ್ವನಿಸಿದ ಅತ್ಯಾಚಾರ ಘಟನೆಯ ಬಗ್ಗೆ ಮೊದಲ ಬಾರಿ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News