ಮರಾಠ ಮೀಸಲಾತಿ: ಮತ್ತೋರ್ವ ಯುವಕ ಆತ್ಮಹತ್ಯೆ

Update: 2018-08-03 18:00 GMT

ಔರಂಗಾಬಾದ್, ಆ. 3: ಮರಾಠಾ ಮೀಸಲಾತಿಗೆ ಆಗ್ರಹಿಸಿ ಮಹಾರಾಷ್ಟ್ರದ ಔರಂಗಾಬಾದ್‌ನ ಚಿಲ್ಕಾಲ್ತಾನಾ ಪ್ರದೇಶದಲ್ಲಿ 21 ವರ್ಷದ ಯುವಕನೋರ್ವ ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಯುವಕ ಸುಸೈಡ್ ನೋಟ್ ಬರೆದು ಇರಿಸಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಹೆತ್ತವರಲ್ಲಿ ಕ್ಷಮೆ ಕೋರಿದ್ದಾನೆ. ಬಿಎಸ್‌ಸಿ ಪದವೀಧರನಾಗಿರುವ ಯುವಕ ಮರಾಠಾ ಮೀಸಲಾತಿಯ ವಿವಿಧ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದ. ಮರಾಠರಿಗೆ ಉದ್ಯೋಗ ದೊರೆಯದಿರುವುದರ ಬಗ್ಗೆ ಹಾಗೂ ಕಡಿಮೆ ಅಂಕ ಗಳಿಸಿದ ಇತರರು ಉದ್ಯೋಗ ಪಡೆಯುತ್ತಿರುವ ಬಗ್ಗೆ ಅಸಮಾಧಾನಗೊಂಡಿದ್ದ ಎಂದು ಔರಂಗಾಬಾದ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುರೇಂದ್ರ ಮತ್ತಾರ್ಥೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News